ಸಲಿಂಗಕಾಮಿಯ ಅತ್ಯಾಚಾರ ಹತ್ಯೆ, 7 ಜನರ ಬಂಧನ
28 ವರ್ಷದ ಸಲಿಂಗ ಕಾಮಿ ಲಾರಿ ಚಾಲಕ ಮೊಹಮ್ಮದ್ ಮೊಹಸಿನ್ ಮೇಲೆ ಏಳು ಜನ ಸಲಿಂಗ ಕಾಮಿಗಳು ಸಾಮೂಹಿಕವಾಗಿ ಅತ್ಯಾಚಾರಗೈದು, ತುಮಕೂರು ಜಿಲ್ಲೆಯ ಹರಳೂರು ಗ್ರಾಮದಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆಗೈದಿದ್ದರು.
ತನಿಖೆ ಕೈಗೊಂಡ ಪೊಲೀಸರು ಹತ್ಯೆಯಾದ ಮೊಹಸಿನ್ ಸ್ನೇಹಿತರ ವಿಚಾರಣೆ ನಡೆಸುತ್ತಿದ್ದಾಗ ಮೊಹಸಿನ್ ಸಲಿಂಗ ಕಾಮಿಯಾಗಿದ್ದ ಎಂಬ ಸಂಗತಿ ಬಹಿರಂಗವಾಯಿತು. ಆತನಿಗೆ ನಂಜುಂಡ ಎಂಬುವವನೊಂದಿಗೆ ಲೈಂಗಿಕ ಸಂಬಂಧವಿತ್ತು ಎಂಬ ಸಂಗತಿಯೂ ತಿಳಿದುಬಂದಿತು.
ತೀವ್ರವಾಗಿ ವಿಚಾರಣೆ ನಡೆಸಿದಾಗ ಹತ್ಯೆಯಲ್ಲಿ ಭಾಗಿಯಾದ ವಿಷಯವನ್ನು ನಂಜುಂಡ ಪೊಲೀಸರಿಗೆ ಹೇಳಿಬಿಟ್ಟಿದ್ದಾನೆ. ಅಂದು ನಡೆದಿದ್ದೇನೆಂದರೆ, ಮೊಹಸಿನ್ ಹತ್ಯೆಯಾದ ದಿನ ಕೂಡ ನಂಜುಂಡ ಆತನೊಡನೆ ಲೈಂಗಿಕ ಸಂಬಂಧ ಬೆಳೆಸಿದ್ದಾನೆ ಮತ್ತು ತನ್ನ ಸ್ನೇಹಿತರನ್ನು ಕೂಡ ಕರೆದಿದ್ದ.
ಉಳಿದ ಸ್ನೇಹಿತರು ಕೂಡ ಸಲಿಂಗ ಕಾಮದ ರುಚಿ ಕಂಡಿದ್ದರಿಂದ ಅವರು ಮೊಹಸಿನ್ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಮುಂದಿನ ಪರಿಣಾಮದ ಬಗ್ಗೆ ಹೆದರಿದ ಆರೋಪಿಗಳು ಮೊಹಸಿನ್ನಲ್ಲಿ ಆ ಸ್ಥಳದಲ್ಲೇ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಬಿಟ್ಟಿದ್ದಾರೆ.
ಬಂಧಿತರನ್ನು ನಂಜುಂಡ, ಮೋಹನ್ ಕುಮಾರ್, ಅಂಬರೀಷ್, ಗಿರೀಶ್, ಸುಧಾಕರ್, ಪ್ರಭಾಕರ್ ಮತ್ತು ಸೋಮ ಅಲಿಯಾಸ್ ಸೋಮಶೇಖರ ಎಂದು ಗುರುತಿಸಲಾಗಿದೆ. ಇವರಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಕೆಲವರ ವಿರುದ್ಧ ಈಗಾಗಲೆ ಕೆಲ ಕೇಸುಗಳು ದಾಖಲಾಗಿವೆ.