ಸೋಮಾರಿ ಮತದಾರರು ಹಾಗೂ ಸಮರ್ಥ ಅಭ್ಯರ್ಥಿ ಸೋಲು
ಬೆಂಗಳೂರು ಪದವೀಧರ ಕ್ಷೇತ್ರದ 15,000 ಮತದಾರರನ್ನು ಜಾಗೃತಗೊಳಿಸಿದ್ದ ಅಶ್ವಿನ್ ಅವರಿಗೆ ಕೇವಲ 4,349 ಮತಗಳು ಲಭಿಸಿದೆ. ಇದರಲ್ಲಿ 4,088 ಮೊದಲ ಪ್ರಾಶಸ್ತ್ಯ ಮತಗಳು ಸೇರಿದೆ. ವಿಜೇತ ಅಭ್ಯರ್ಥಿ ರಾಮಚಂದ್ರಗೌಡ ಅವರಿಗೆ 6,521 ಮೊದಲ ಪ್ರಾಶಸ್ತ್ಯ ಮತಗಳು ಲಭಿಸಿದ್ದು ಗಮನಾರ್ಹ.
ಮಹೇಶ್
ಅವರು
ನೋಂದಾಯಿಸಿದ್ದ
15,000
ಪದವೀಧರರಲ್ಲಿ
ಕೇವಲ
4
ಸಾವಿರ
ಜನ
ಬಂದು
ಮತ
ಚಲಾಯಿಸಿದ್ದು
ಅಶ್ವಿನ್
ಗೆ
ಮುಳುವಾಗಿದೆ.
ಎರಡನೇ
ಸ್ಥಾನ
ಪಡೆದ
ಅಭ್ಯರ್ಥಿ
ಎ
ದೇವೇಗೌಡ
ಅವರು
242
ಮತಗಳ
ಅಂತರದಿಂದ
ಸೋಲುಂಡಿದ್ದು
ಗಮನಿಸಿದರೆ,
ಮಹೇಶ್
ಅವರು
ನೀಡಿದ
ಪೈಪೋಟಿ
ಅರ್ಥ
ಮಾಡಿಕೊಳ್ಳಬಹುದು.
ಬೆಂಗಳೂರಿಗರದ್ದು ಹುಸಿ ಹೋರಾಟವೇ? : ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಅವರು ಬೆಂಗಳೂರಿನಲ್ಲಿ ಆಂದೋಲನ ಕೈಗೊಂಡಾಗ, ವಾರಾಂತ್ಯದಲ್ಲಿ ಮುಗಿಬಿದ್ದು ಬೆಂಗಳೂರಿಗರು ಜಮಾವಣೆಗೊಳ್ಳುತ್ತಿದ್ದರು. ಆದರೆ, ಟೀಂ ಅಣ್ಣಾ ಬೆಂಬಲಿತ ಅಭ್ಯರ್ಥಿ ಚುನಾವಣೆಗೆ ನಿಂತರೆ ಬೆಂಬಲಿಸುವ ಬದಲು ವಾರಾಂತ್ಯದ ಸುಖ ಕಾಣುತ್ತಾ ಪದವೀಧರ ಮತದಾರರು ಮತಗಟ್ಟೆಯಿಂದ ದೂರ ಉಳಿದಿದ್ದು ದುರ್ದೈವ.
ನಾಗರೀಕ ಸಮಸ್ಯೆಗಳು ಬಂದಾಗ ಒಕ್ಕೊರಲ ದನಿ ಏರಿಸುವ ಬೆಂಗಳೂರಿಗರು ಸಮಸ್ಯೆ ಪರ ಹೋರಾಟ ನಡೆಸುವ ಸಮರ್ಥ ಅಭ್ಯರ್ಥಿಯನ್ನು ಬೆಂಬಲಿಸುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಬದಲಾವಣೆ ಬೇಕು ಎನ್ನುವ ಜನರು ಬೆಂಬಲ ನೀಡುವುದನ್ನು ಕಲಿತರೆ ಒಳ್ಳೆಯದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ.
ಅಶ್ವಿನ್ ಮಹೇಶ್ ಯಾರು?: ಖಗೋಳ ಹಾಗೂ ವಾಯುಮಂಡಲ ವಿಜ್ಞಾನಿಯಾಗಿ ತರಬೇತಿ ಪಡೆದಿರುವ ಡಾ. ಅಶ್ವಿನ್ ಮಹೇಶ್ ಅಮೆರಿಕದ ಪ್ರತಿಷ್ಠಿತ ನಾಸಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಮಹೇಶ್ ತಮ್ಮ ವೃತ್ತಿ ಜೀವನವನ್ನು ನಕ್ಷತ್ರಗಳ ರಚನೆ, ಜಾಗತಿಕ ಹವಾಮಾನ ಬದಲಾವಣೆ, ನಗರೀಕರಣ ಹಾಗೂ ಸಾರ್ವಜನಿಕ ಸಾರಿಗೆ ಮುಂತಾದ ವಿಷಯಗಳ ಕುರಿತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಅವರು ಸಂಶೋಧನಕಾರರಾಗಿ Centre of Excellence in Urban Governance, IIMB, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ABIDE ಸದಸ್ಯರಾಗಿ ಡಾ. ಅಶ್ವಿನ್ ಮಹೇಶ್ ಅವರು ಬೆಂಗಳೂರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರಮುಖವಾಗಿ ನಗರ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇವರು ಪರಿಚಯಿಸಿದ ಬಿಗ್10/ಬಿಗ್ಸರ್ಕಲ್ ಬಸ್ಸುಗಳು ಜನಪ್ರಿಯವಾಗಿವೆ.
ಬೆಂಗಳೂರು ಸಂಚಾರ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸಲು ದೇಶದಲ್ಲೇ ಪ್ರಥಮ ಬಾರಿಗೆ ಉತ್ಕೃಷ್ಟ ಸಂಚಾರ ನಿರ್ವಹಣಾ ಕೊಠಡಿಯನ್ನು ಸ್ಥಾಪಿಸುವಲ್ಲಿ ನೆರವಾಗಿದ್ದಾರೆ ಮತ್ತು ತಮ್ಮ ಮ್ಯಾಪಯುನಿಟಿ ಕಂಪನಿಯಿಂದ ಮಾಹಿತಿ ತಂತ್ರಜ್ಞಾನದ ನೆರವನ್ನು ನೀಡಿದ್ದಾರೆ. ಇವರ ಸಾಮಾಜಿಕ ಕೊಡುಗೆಯನ್ನು ಗುರುತಿಸಿ 2009ರಲ್ಲಿ ಸಾಮಾಜಿಕ ಉದ್ಯಮಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅಶೋಕಾ ಫೇಲೊ ಗೌರವ ದೊರೆತಿದೆ.
ಡಾ. ಅಶ್ವಿನ್ ಅವರು ಭ್ರಷ್ಟಾಚಾರದ ವಿರುದ್ಧ ಭಾರತ (India Against Corruption)ದಲ್ಲಿ ಕರ್ನಾಟಕದ ಧ್ವನಿಯಾಗಿ ಹೋರಾಟ ಮಾಡಿದ್ದಾರೆ ಮತ್ತು ಕರ್ನಾಟಕದಲ್ಲಿ 'ಭ್ರಷ್ಟಾಚಾರ ಸಾಕು' ಚಳವಳಿಯನ್ನು ಪ್ರಾರಂಭಿಸಿದವರಲ್ಲಿ ಒಬ್ಬರಾಗಿದ್ದಾರೆ.