ಪೇದೆ ಸುಜಾತಾ ಆತ್ಯಹತ್ಯೆ ಹಿಂದೆ ಇನ್ಸ್ ಪೆಕ್ಟರ್?

ಸುಜಾತಾ ಜೊತೆ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದ ಇನ್ಸ್ ಪೆಕ್ಟರ್ ಬೆಂಗಳೂರಿಗೆ ವರ್ಗವಾಗಿದ ನಂತರವೂ ಸುಜಾತ ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಗಂಟೆಗಟ್ಟಲೇ ಮಾತುಕತೆ ನಡೆದಿದೆ ಎಂದು ಸುಜಾತಾಳ ಫೋನ್ ಹೇಳುತ್ತಿದೆ.
ಆದರೆ, ಇಬ್ಬರ ನಡುವೆ ಬರೀ ಸ್ನೇಹವಿತ್ತೇ ಅಥವಾ ಸ್ನೇಹಕ್ಕೂ ಮೀರಿದ ಆಪ್ತತೆ ಇತ್ತೇ? ತಿಳಿದು ಬಂದಿಲ್ಲ. ಸಾವಿಗೂ ಮುನ್ನ ಸುಜಾತಾ ಹೆಚ್ಚು ಕಾಲ ಯಾರೊಂದಿಗೋ ಮಾತನಾಡುತ್ತಿದ್ದಳು ಎಂದು ಆಕೆ ತಂದೆ ಕೂಡಾ ಹೇಳಿದ್ದಾರೆ. ಸುಜಾತಾಳ ಕೊನೆ ಕರೆ ಇನ್ಸ್ ಪೆಕ್ಟರ್ ಗೆ ಹೋಗಿತ್ತು ಎಂಬುದು ಕೂಡಾ ಸ್ಪಷ್ಟವಾಗಿದೆ.
ಮೈಸೂರು ನಗರ ಪೊಲೀಸರು UDR(unnatural death) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುಜಾತಾ ತನ್ನ ಪತಿ ಲಿಂಗದೇವರು ಜೊತೆ ಜಗಳವಾಡಿಕೊಂಡು ಆತನ ಮನೆ ಬಿಟ್ಟು ತವರಿಗೆ ಬಂದಿದ್ದಳು.
ಈ ನಡುವೆ ಮೈಸೂರಿನಲ್ಲಿ ಪರಿಚಯವಾಗಿದ್ದ ಇನ್ಸ್ ಪೆಕ್ಟರ್ ಆಕೆಯೊಂದಿಗೆ ಸಲುಗೆಯಿಂದ ಇರತೊಡಗಿದ್ದ. ಗಂಡನನ್ನು ತೊರೆದ ಮೇಲೆ ಕೆಲ ಕಾಲ ಸುಜಾತಾ ತವರಿನಲ್ಲಿ ತನ್ನ ಪಾಡಿಗೆ ತಾನಿದ್ದಳು. ಆದರೆ, ಇನ್ಸ್ ಪೆಕ್ಟರ್ ಆಕೆಗೆ ಮೆಸೇಜ್ ಮಾಡಿ, ಯಾಕೆ ನನ್ನ ಮರೆತು ಬಿಟ್ಟಿಯಾ. ನೀ ಇಲ್ಲದಿದ್ದರೆ ನಾನು ಸತ್ತು ಬಿಡುತ್ತೇನೆ ಎಂದೆಲ್ಲ ಪ್ರಲಾಪಿಸಿದ್ದ. ಈ ಎಸ್ ಎಂಎಸ್ ಕೂಡಾ ಈಗ ತನಿಖಾಧಿಕಾರಿಗಳ ಕೈಗೆ ಸಿಕ್ಕಿದೆ.
ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆದಿರುವುದರಿಂದ ಈ ಸಮಯಕ್ಕೆ ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಇನ್ಸ್ ಪೆಕ್ಟರ್ ಜೊತೆ ಆಕೆಗೆ ಗೆಳೆತನವಿತ್ತು ಎಂಬುದು ನಿಜ. ಆದರೆ, ಆಕೆ ಸಾವಿಗೂ ಗೆಳೆತನಕ್ಕೂ ಏನು ಸಂಬಂಧ ಎಂಬುದು ಸ್ಪಷ್ಟವಾಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆಎಲ್ ಸುಧೀರ್ ಹೇಳಿದ್ದಾರೆ.
ಸಾವಿಗೆ ಜಾರುವ ದಿನ, ಕೆಲಸ ಮುಗಿಸಿ ಹೊರಬಂದ ಮೇಲೆ ಮಧ್ಯರಾತ್ರಿ ತನಕ ಫೋನ್ ನಲಿ ಮಾತನಾಡಿದ್ದಾಳೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ಸ್ ಪೆಕ್ಟರ್ ಹೆಸರು, ವಿವರಗಳನ್ನು ಇನ್ನೂ ತನಿಖಾಧಿಕಾರಿಗಳು ಬಹಿರಂಗಪಡಿಸಿಲ್ಲ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications