ಪಬ್ಬು ಬಾರಿಗೂ ಬಂತು ಸಿಸಿಟಿವಿ: ಬೀರಬಲ್ಲರಿಗೆ ಕಂಟಕ
ಬೆಂಗಳೂರು, ಜೂನ್ 4: ಮದ್ಯದ ಬಾರ್ ಗಳು, ವೈನ್ ಶಾಪುಗಳಲ್ಲಿ closed circuit cameraಗಳನ್ನು (CCTV) ಅಳವಡಿಸುವ ಸಂಬಂಧ ಬೆಂಗಳೂರು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ರಾಜಧಾನಿಯಲ್ಲಿ ಪ್ರತಿಯೊಂದು ಪಬ್ಬು, ಬಾರುಗಳ ಮಾಲೀಕರು ತಕ್ಷಣದಿಂದಲೇ ಈ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಬಹುತೇಕ ಅಪರಾಧಗಳು ಹುಟ್ಟುವುದೇ ಈ ತಾಣಗಳಲ್ಲಿ ಎಂಬುದು ಪೊಲೀಸರ ಅಚಲ ನಂಬಿಕೆ. ಪಬ್ಬುಗಳ ಮಬ್ಬಗತ್ತಲು ಸಮಾಜಘಾತುಕ ಶಕ್ತಿಗಳಿಗೆ ಆಶ್ರಯತಾಣ. ಆದ್ದರಿಂದ ನಗರದಲ್ಲಿ ಅಪರಾದಗಳು, ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಈ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಪೊಲೀಸರ ಆಪದ್ಬಾಂಧವ: ಎಲ್ಲ ಪಬ್ಬು, ಬಾರುಗಳಲ್ಲಿ ಈ CCTV ನೇತುಹಾಕುವ ಜವಾಬ್ದಾರಿಯನ್ನು ಆಯಾ DCPಗಳಿಗೆ ವಹಿಸಲಾಗಿದೆ. ಉಪ್ಪಾರಪೇಟೆ, ವಿಲ್ಸನ್ ಗಾರ್ಡನ್, ಚಾಮರಾಜ ಪೇಟೆ, ಆಡುಗೋಡಿ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಈ CCTVಗಳು ಕಾಣಿಸಿಕೊಳ್ಳಲಿವೆ.
ಆದರೆ ಇದರ ಮೇಲೆ ಸೌಮ್ಯ (?) ಬೀರಬಲ್ಲರು ಕೆಂಗಣ್ಣು ಬೀರುತ್ತಿದ್ದಾರೆ. ಏನೋ ನಮ್ಮ ಪಾಡಿಗೆ ನಾವು ಹೋಗಿ ನಾಲ್ಕು ಹನಿ ದ್ರವ ಹಾಕಿಕೊಂಡು ಬರುತ್ತಿದ್ದೆವು. ಈಗ ಅದು ಕ್ಯಾಮರಾಗಳಲ್ಲಿ ದಾಖಲಾಗುತ್ತದೆ ಎಂಬುದು ಆತಂಕದ ವಿಷಯ. ನಮ್ಮ ಮಾನಮರ್ಯಾದೆ ಪ್ರಶ್ನೆ ಎಂದು ಹಕ್ಕು ಚಲಾಯಿಸಿದ್ದಾರೆ.
ಅಪರಾಧಿಗಳನ್ನು ಪತ್ತೆಹಚ್ಚಲು ಇದು ಪರಿಣಾಮಕಾರಿ ವ್ಯವಸ್ಥೆ ಎಂಬುದು ಪೊಲೀಸ್ ಇಲಾಖೆಯ ಅಪಾರ ನಂಬಿಕೆ. ಪೊಲೀಸರ ಈ ನಂಬಿಕೆಗೆ CCTVಗಳು ಚ್ಯುತಿ ತಂದಿಲ್ಲ ಎನ್ನಬಹುದು. ಏಕೆಂದರೆ ಇತ್ತೀಚಿಗೆ ಅನೇಕ ಪ್ರಕರಣಗಳನ್ನು ಪೊಲೀಸರು ಬೇಧಿಸಿರುವುದೇ CCTV ಎಂಬ ಈ ಬ್ರಹ್ಮಾಸ್ತ್ರಗಳಿಂದ. ಅಷ್ಟರಮಟ್ಟಿಗೆ ಪೊಲೀಸರ ಕೆಲಸವೂ ಸಲೀಸಾಗಿದೆ. ಆದ್ದರಿಂದಲೇ ಪೊಲೀಸರಿಗೆ ಇವು ಆಪದ್ಬಾಂಧವ ಮತ್ತು ಆಪ್ಯಾಯಮಾನ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications