'ಪೆಟ್ರೋಲ್ ಬಾಂಬ್': ಮೇ 31 ಭಾರತ್ ಬಂದ್

ಬೆಂಗಳೂರಿನಲ್ಲಿ ಪೆಟ್ರೋಲ್ ದರ 81 ರುಪಾಯಿ ಆಗಿದೆ. ಹಣದುಬ್ಬರವೋ, ಮತ್ತೊಂದೋ ಅಂತೂ ಪೆಟ್ರೋಲ್ ದರ ಏರಿಕೆಯಿಂದ ಜನಸಾಮಾನ್ಯನಿಗೆ ಉಬ್ಬಸ ಬಂದಂತಾಗಿದೆ.
ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಪೆಟ್ರೋಲ್ ಗ್ರಾಹಕರ ನೆರವಿಗೆ ಧಾವಿಸಿವೆ. ಕೇಂದ್ರ ಸರಕಾರ ಬೆಲೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಇದೇ ಮೇ 31ರಂದು (ಅಂದರೆ ಮುಂದಿನ ಗುರುವಾರ) ದೇಶವ್ಯಾಪಿ ಬಂದ್ ಗೆ ಕರೆ ನೀಡಿದೆ. ಮುಖ್ಯವಾಗಿ ಎನ್ ಡಿಎ ಮೈತ್ರಿಕೂಟ ಪೆಟ್ರೋಲ್ ದರ ಏರಿಕೆ ವಿರೋಧಿಸಿ, ಬಂದ್ ಗೆ ಕರೆ ನೀಡಿದೆ ಎಂದು NDA ಸಂಚಾಲಕ ಜೆಡಿಯು ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ.
ಆದರೆ ಜನರ ಆಕ್ರೋಶ ಇಷ್ಟಕ್ಕೇ ತಣ್ಣಗಾಗದ ಜನರು ಎನ್ ಡಿಎ ಮೈತ್ರಿ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ (ಕರ್ನಾಟಕ ಸೇರಿದಂತೆ) ಮೊದಲು ತೆರಿಗೆ ಕಡಿಮೆ ಮಾಡಬಹುದಲ್ಲಾ? ಎಂದು ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ಕರ್ನಾಟಕದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ (VAT) ಇಡೀ ದೇಶದಲ್ಲೇ ಗರಿಷ್ಠವಾಗಿದ್ದು, ತತ್ಫಲವಾಗಿ ಪೆಟ್ರೋಲ್ ದರವೂ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅತ್ಯಧಿಕವಾಗಿದೆ.












Click it and Unblock the Notifications