ರಾಜೀವ್ ಹಂತಕರ ಪ್ಲಸ್2 ಫಲಿತಾಂಶ ಔಟ್

ಮೊದಲಿಗೆ ಇಬ್ಬರ ಮಾರ್ಕ್ಸ್ ಕಾರ್ಡ್ ನೋಡಿ ನಂತರ ಅವರ ಬಗ್ಗೆ ತಿಳಿಯೋಣ..ಇದರ ಜೊತೆಗೆ ಮುರುಗನ್(43)ಅವರು 1200 ಅಂಕಗಳಿಗೆ 983 ಅಂಕಗಳಿಸಿದ್ದರೆ, ಪೆರರಿವಳನ್(41)ಅವರು 1096 ಅಂಕ ಗಳಿಸಿದ್ದಾರೆ.
ಕ್ಲಾಸ್ XII ತಮಿಳುನಾಡು ಬೋರ್ಡ್ ಪರೀಕ್ಷೆ [ಕರ್ನಾಟಕ II ಪಿಯು ಫಲಿತಾಂಶ ನೋಡಿ]ಯಲ್ಲಿ ಶೇ 91 ಹಾಗೂ ಶೇ 81 ರಷ್ಟು ಅಂಕಗಳೊಂದಿಗೆ ಈ ಇಬ್ಬರು ಭರ್ಜರಿ ಫಲಿತಾಂಶ ಹೊರ ಹಾಕಿದ್ದಾರೆ.
ಅಂದ ಹಾಗೆ ಮುರುಗನ್ ಹಾಗೂ ಪೆರರಿವಳನ್ ವೆಲ್ಲೂರಿನ ಜೈಲಿನಲ್ಲಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಮುಖ ಆರೋಪಿ ನಳಿನಿಯ ಪತಿ ಮುರುಗನ್ ಗೆ ಕಾಮರ್ಸ್ ವಿಷಯ ಇಷ್ಟವಂತೆ.
ಪೆರರಿವಳನ್ ತಮಿಳಿನಲ್ಲಿ 185, ಇತಿಹಾಸದಲ್ಲಿ 183 ಹಾಗೂ ಅರ್ಥಶಾಸ್ತ್ರದಲ್ಲಿ 182 ಅಂಕಗಳಿಸಿದ್ದಾರೆ.
ಮುರುಗನ್ ತಮಿಳಿನಲ್ಲಿ 173, ಇಂಗ್ಲೀಷ್ ನಲ್ಲಿ 165 ಅಂಕಗಳಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಈ ಇಬ್ಬರು ಅತಿಮುಖ್ಯ ಜೈಲುಹಕ್ಕಿಗಳ ಜೊತೆಗೆ ಇನ್ನೂ 8 ಜನ ಪರೀಕ್ಷೆ ಬರೆದಿದ್ದರು. ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಯಾರೂ ಕಾಪಿ ಹೊಡೆದಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಸುಪ್ರೀಂಕೋರ್ಟಿನಲ್ಲಿ ಪೆರರಿವಳನ್ ಹಾಗೂ ಮುರುಗನ್ ಅವರ ಕ್ಷಮಾದಾನದ ಕೇಸ್ ಇನ್ನೂ ವಿಚಾರಣೆ ಹಂತದಲ್ಲಿದೆ. ರಾಜೀವ್ ಹತ್ಯೆಯಾಗಿ 11 ವರ್ಷದ 2011ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ ಈ ಇಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ.
ಶ್ರೀಪೆರಂಬದೂರಿನಲ್ಲಿ ಮೇ.21, 1991ರಲ್ಲಿ ಎಲ್ ಟಿಟಿಐ ಬಾಂಬರ್ ದಾಳಿಗೆ ಸಿಲುಕಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹತ್ಯೆಯಾಗಿತ್ತು. ಮೇ.22, 2012 ರಂದು ಹತ್ಯೆ ಆರೋಪ ಹೊತ್ತ ಇಬ್ಬರು ಪ್ಲಸ್ 2 ಪರೀಕ್ಷೆಯಲ್ಲಿ ಪಾಸಾಗಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications