ಐಎಎಸ್ ಜೈರಾಜ್ ನಿವೃತ್ತಿ; 'ಜೈತ್ರಯಾತ್ರೆ' ಬಿಡುಗಡೆ

ias-k-jairaj-retires-jaitrayatra-book-release
ಬೆಂಗಳೂರು, ಮೇ 17: ನಾಡು ಕಂಡ ಅತ್ಯಪರೂಪದ ಅಧಿಕಾರಿಗಳಲ್ಲಿ ಒಬ್ಬರಾದ ಕೆ. ಜೈರಾಜ್ ನಿವೃತ್ತಿ ಅಂಚಿಗೆ ಬಂದು ನಿಂತಿದ್ದಾರೆ. ಸುದೀರ್ಘ ಕಾಲ ರಾಜ್ಯ ಸರಕಾರದ ಆಡಳಿತದಲ್ಲಿ ಸೇವೆ ಸಲ್ಲಿಸಿರುವ ಜೈರಾಜ್ ಅವರಿಗೆ ಇದೇ ಭಾನುವಾರ ಅಭಿವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೇಳಬೇಕು ಅಂದರೆ, ಈ ಕಾರ್ಯಕ್ರಮ ಜೈರಾಜ್ ಬರೆದಿರುವ ಪುಸ್ತಕದ ಬಿಡುಗಡೆಯ ಸಮಾರಂಭ.

ಐಎಎಸ್ ಜೈರಾಜ್ (ಜನನ 25-05-1952) ತಮ್ಮ ಅಪಾರ, ಅಮೂಲ್ಯ ಆಡಳಿತಾನುಭವದಲ್ಲಿ ಕಂಡ ಅಪರೂಪದ ಪ್ರಸಂಗಗಳನ್ನು (ಜುಲೈ 79 ರಲ್ಲಿ ಸೇವೆ ಆರಂಭ) ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅಂಕಿತ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.

ಈ ಕಾರ್ಯಕ್ರಮವು ರಾಜಧಾನಿಯ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 20-5-2012ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಅವರು ಜೈರಾಜ್ ಅವರ 'ಜೈತ್ರಯಾತ್ರೆ -ಆಡಳಿತದ ನೆನಪುಗಳು' ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಮತ್ತು ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನೆಲ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+