ನಾಳೆಗೆ ಸದಾ ಸರಕಾರ ಅಂತ್ಯ; ಬಿಎಸ್ವೈ ಹೊಸ ಪಕ್ಷ

ಯಡಿಯೂರಪ್ಪ ಅವರು ಸಂಕಟದಲ್ಲಿರುವಾಗ ಅಧಿಕಾರ ಅನುಭವಿಸುವುದು (ಯಾರು?) ನಮಗೆ ಬೇಕಾಗಿಲ್ಲ. ಆದ್ದರಿಂದ ಯಡಿಯೂರಪ್ಪ ಬೆಂಬಲಿತ 45 ಶಾಸಕರು, 3 ಸಚಿವರು ಮತ್ತು ತಾವೂ ಸೇರಿದಂತೆ ಕೆಲವು ನಿಗಮ ಮಂಡಳಿ ಅಧ್ಯಕ್ಷರು ಸೋಮವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಆಗ ನೈತಿಕ ಹೊಣೆ ಹೊತ್ತು ಸದಾನಂದರು ನಿರ್ಗಮಿಸುತ್ತಾರೆ ಎಂದು ತುರುವೇಕೆರೆಯ ಲಕ್ಷ್ಮೀನಾರಾಯಣ ಭಾನುವಾರ ಬೆಳಗ್ಗೆ Public TVಗೆ ತಿಳಿಸಿದ್ದಾರೆ.
ಇದೇ ವೇಳೆ, ಯಡಿಯೂರಪ್ಪ ಅವರು ಹೊಸ ಪಕ್ಷ ಸ್ಥಾಪಿಸುವುದು ಬಹುತೇಕ ಖಚಿತ ಎಂದೂ ಲಕ್ಷ್ಮೀನಾರಾಯಣ ಘೋಷಿಸಿದ್ದಾರೆ.












Click it and Unblock the Notifications