ಅಂಬೇಡ್ಕರ್ ಕಾರ್ಟೂನ್ ವಿವಾದ: ಕಪಿಲ್ ಕ್ಷಮೆ

Kapil Sibal
ನವದೆಹಲಿ, ಮೇ.11: ಎನ್ ಸಿಇ ಆರ್ ಟಿ ಪಠ್ಯಪುಸ್ತಕದಲ್ಲಿ ಡಾ.ಅಂಬೇಡ್ಕರ್ ಅವರಅವಹೇಳನಕಾರಿ ವ್ಯಂಗ್ಯಚಿತ್ರ ವಿವಾದ ಸಂಸತ್ತಿನಲ್ಲಿ ಶುಕ್ರವಾರ(ಮೇ.11) ಭಾರಿ ಗದ್ದಲ ಉಂಟು ಮಾಡಿತು. ವಿವಾದಕ್ಕೆ ಮುಕ್ತಾಯ ಹಾಡುವ ನಿಟ್ಟಿನಲ್ಲಿ ಅಪಮಾನಕರ ಚಿತ್ರವನ್ನು ಮುಂದಿನ ವರ್ಷದ ಪಠ್ಯಕ್ರಮದಿಂದ ಕೈಬಿಡಲಾಗುವುದು ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಕ್ಷಮೆಯಾಚಿಸಿ, ಸ್ಪಷ್ಟನೆ ನೀಡಿದ್ದಾರೆ.

ಈ ರೀತಿ ಖಂಡನೀಯ ಕಾರ್ಟೂನ್ ಗಳನ್ನು ಬಳಸದಂತೆ ಎಚ್ಚರಿಕೆ ವಹಿಸಲಾಗುವುದು. ಈ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. ಮುಂದಿನ ವರ್ಷದಿಂದ ಎನ್ ಸಿಇಆರ್ ಟಿ ಪಠ್ಯಪುಸ್ತಕದಲ್ಲಿ ಈ ರೀತಿ ಪ್ರಮಾದವಾಗುವುದಿಲ್ಲ ಎಂದು HRD ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆಯಲ್ಲಿ ಗದ್ದಲ: ಸಂವಿಧಾನ ಕರ್ತೃ ಅಂಬೇಡ್ಕರ್ ಅವರಿಗೆ ಅಪಮಾನವಾಗಿರುವುದನ್ನು ಪ್ರತಿಪಕ್ಷ ಮುಖಂಡರು ಒಕ್ಕೊರಲಿನಿಂದ ಖಂಡಿಸಿದರು. ಎರಡು ಮೂರು ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಸಂಸತ್ತಿನ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಬಿಎಸ್ಪಿ ಮಾಯಾವತಿ ಗುಡುಗಿದರು.

ವಿಶೇಷವೆಂದರೆ, ಕಾಂಗ್ರೆಸ್ ಪಕ್ಷದ ಪಿಎಲ್ ಪೂನಿಯಾ ಅವರು ಕಪಿಲ್ ಸಿಬಲ್ ಅವರನ್ನು ಗುರಿಯಾಗಿಸಿಕೊಂಡು ಕ್ಷಮಾಪಣೆಗೆ ಆಗ್ರಹಿಸಿದರು.

"Indian Constitution at Work" ಶೀರ್ಷಿಕೆಯ ಚಾಪ್ಟರ್ 1ರ ರಾಜ್ಯನೀತಿ ವಿಷಯ ಸಿಬಿಎಸ್ ಸಿ ಪಠ್ಯಪುಸ್ತಕದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅಪಮಾನಕರ ಕಾರ್ಟೂನ್ ಬಳಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+