ಕಾರಿನ ಬುರ್ಖಾ ಸರಿಸಲು ಪೊಲೀಸ್ ಡೆಡ್ಲೈನ್

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮುಂಬದಿಯ ಮತ್ತು ಹಿಂಬದಿಯ ಗಾಜಿನ ಕಿಟಕಿಗಳ ಮುಖಾಂತರ ಶೇ.70ರಷ್ಟು ಮತ್ತು ಬದಿಯ ಕಿಟಕಿಯ ಮುಖಾಂತರ ಶೇ.50ರಷ್ಟು ಬೆಳಕು ಒಳಗಡೆ ತೂರುವಂತಿರಬೇಕು. ಟಿಂಟೆಡ್ ಗ್ಲಾಸ್ ಅಳವಡಿಸಿದ್ದರಿಂದ ಕುಡಿತ, ಜೂಜು, ಶಸ್ತ್ರಾಸ್ತ್ರ ಸಾಗಾಣಿಕೆ, ಅತ್ಯಾಚಾರಗಳಂಥ ಅಪರಾಧಗಳು ಹೆಚ್ಚುತ್ತಿರುವುದರ ಕಾರಣ ಈ ಆದೇಶ ನೀಡಲಾಗಿದೆ.
ಈ ಟಿಂಟೆಡ್ ಫಿಲ್ಮ್ ತೆಗೆಸಲು ವಾಹನ ಮಾಲಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಡೆಡ್ ಲೈನ್ ಮೇ 19ರಂದು ಕೊನೆಗೊಳ್ಳುತ್ತಿದೆ. ಇದರಿಂದಾಗಿ ದಂಡಗಳಿಗೆ ಅವಕಾಶ ನೀಡದೆ, ಬಣ್ಣದ ಫಿಲ್ಮ್ ತೆಗೆಸಿ ಸುಪ್ರೀಂ ಕೋರ್ಟ್ ಆದೇಶವನ್ನು ಮಾಲಿಕರು ಮಾನ್ಯ ಮಾಡಬೇಕಾಗಿದೆ. ಈ ನಿರ್ಬಂಧ ಝಡ್ ಮತ್ತು ಝಡ್ ಪ್ಲಸ್ ಸೆಕ್ಯೂರಿಟಿ ಇರುವ ವಾಹನಗಳಿಗೆ ಅನ್ವಯವಾಗುವುದಿಲ್ಲ.
ಟಿಂಟೆಡ್ ಫಿಲ್ಮ್ ತೆಗೆಸುವುದು ಎಲ್ಲಿ? : ಹಿಂಬದಿ ಮತ್ತು ಮುಂಬದಿಯ ಗ್ಲಾಸ್ ಶೇ.70ರಷ್ಟು ಮತ್ತು ಬದಿಯ ಗ್ಲಾಸ್ಗಳು ಶೇ.50ರಷ್ಟು ಬೆಳಕಿಗೆ ಅವಕಾಶ ಕೊಡದ ಗ್ಲಾಸುಗಳನ್ನು ತೆಗಸಲು ಕೆಲ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಶಿವಾಜಿನಗರದ ಬಿಆರ್ವಿ ಮೈದಾನ, ಆಡುಗೋಡಿ ಮತ್ತು ಮೈಸೂರು ರಸ್ತೆಯಲ್ಲಿರುವ ನಗರ ಶಸ್ತ್ರ ಮೀಸಲು ಪಡೆ ಮೈದಾನ, ಮಲ್ಲೇಶ್ವರದ ಆಟದ ಮೈದಾನ, ಜಯನಗರದ ಮಾಧವನ್ ಪಾರ್ಕ್ಗಳಲ್ಲಿ ಇವುಗಳನ್ನು ತೆಗೆಸಬಹುದು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಪ್ಲಾಜಾ, ಯಲಹಂಕ ಪೊಲೀಸ್ ಠಾಣೆ, ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್, ಕಂಠೀರವ ಕ್ರೀಡಾಂಗಣ, ಫ್ರೇಸರ್ ಟೌನ್ನಲ್ಲಿರುವ ಫುಟ್ಬಾಲ್ ಮೈದಾನಗಳಲ್ಲಿಯೂ ನಿರ್ಬಂಧಿತ ಟಿಂಟೆಡ್ ಗ್ಲಾಸ್ಗಳನ್ನು ತೆಗೆಸಲು ಅವಕಾಶ ಮಾಡಿಕೊಡಲಾಗಿದೆ. ಈ ಸೌಲಭ್ಯ ಉಚಿತ.
ಈ ಆದೇಶವನ್ನು ಎಷ್ಟು ಜನ ಪಾಲಿಸುತ್ತಾರೆ? ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯವಾಗಿದ್ದರೂ ಇಲ್ಲದೆ ವಾಹನ ಚಲಾಯಿಸುತ್ತಾರೆ. ಕುಡಿದು ಓಡಿಸುವುದನ್ನು ನಿಷೇಧಿಸಲಾಗಿದ್ದರೂ ಕುಡಿದೇ ಚಲಾಯಿಸುತ್ತಾರೆ. ಸಿಗ್ನಲ್ ಜಂಪ್ ಮಾಡುವುದು ಅಪರಾಧವೆಂದು ತಿಳಿದಿದ್ದರೂ ಜಂಪ್ ಮಾಡುತ್ತಾರೆ. ರಾತ್ರಿ ಹೈಬೀಮ್ ಬಳಸಿದರೆ ದಂಡ ಕಕ್ಕಿಸುತ್ತಾರೆ ಎಂದು ಗೊತ್ತಿದ್ದರೂ ಹೈಬೀಮ್ ಬಳಸುತ್ತಾರೆ. ಇದಕ್ಕೆ ಟಿಂಟೆಡ್ ಗ್ಲಾಸ್ ಕೂಡ ಸೇರ್ಪಡೆಯಾಗಲಿದೆಯೆ?
ದಂಡ ಎಷ್ಟು? : ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಂದ್ರ ಮೋಟಾರ್ ವೆಹಿಕಲ್ ಕಾಯ್ದೆಯ 177ನೇ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಮೇ 19ರ ನಂತರವೂ ಬಣ್ಣದ ಫಿಲ್ಮ್ ಬಳಸಿದರೆ 100 ರು. ದಂಡ ವಿಧಿಸಲಾಗುವುದು. ಎರಡನೇ ಬಾರಿ ಅಪರಾಧವೆಸಗಿದರೆ 300 ರು. ದಂಡ. ಮಾಡಿದ ತಪ್ಪು ತಿದ್ದಿಕೊಳ್ಳದೆ ಮೂರನೇ ಬಾರಿಯೂ ಇದೇ ಅಪರಾಧ ಎಸಗಿದರೆ 300 ರು. ದಂಡ ಮತ್ತು ಲೈಸೆನ್ಸ್ ಕಳೆದುಕೊಳ್ಳಲು ಸಿದ್ಧರಾಗಿರಬೇಕಾಗಿದೆ. ಆಯ್ಕೆ ವಾಹನ ಮಾಲಿಕರದ್ದು.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications