ಕಾರಿನ ಬುರ್ಖಾ ಸರಿಸಲು ಪೊಲೀಸ್ ಡೆಡ್ಲೈನ್

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮುಂಬದಿಯ ಮತ್ತು ಹಿಂಬದಿಯ ಗಾಜಿನ ಕಿಟಕಿಗಳ ಮುಖಾಂತರ ಶೇ.70ರಷ್ಟು ಮತ್ತು ಬದಿಯ ಕಿಟಕಿಯ ಮುಖಾಂತರ ಶೇ.50ರಷ್ಟು ಬೆಳಕು ಒಳಗಡೆ ತೂರುವಂತಿರಬೇಕು. ಟಿಂಟೆಡ್ ಗ್ಲಾಸ್ ಅಳವಡಿಸಿದ್ದರಿಂದ ಕುಡಿತ, ಜೂಜು, ಶಸ್ತ್ರಾಸ್ತ್ರ ಸಾಗಾಣಿಕೆ, ಅತ್ಯಾಚಾರಗಳಂಥ ಅಪರಾಧಗಳು ಹೆಚ್ಚುತ್ತಿರುವುದರ ಕಾರಣ ಈ ಆದೇಶ ನೀಡಲಾಗಿದೆ.
ಈ ಟಿಂಟೆಡ್ ಫಿಲ್ಮ್ ತೆಗೆಸಲು ವಾಹನ ಮಾಲಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಡೆಡ್ ಲೈನ್ ಮೇ 19ರಂದು ಕೊನೆಗೊಳ್ಳುತ್ತಿದೆ. ಇದರಿಂದಾಗಿ ದಂಡಗಳಿಗೆ ಅವಕಾಶ ನೀಡದೆ, ಬಣ್ಣದ ಫಿಲ್ಮ್ ತೆಗೆಸಿ ಸುಪ್ರೀಂ ಕೋರ್ಟ್ ಆದೇಶವನ್ನು ಮಾಲಿಕರು ಮಾನ್ಯ ಮಾಡಬೇಕಾಗಿದೆ. ಈ ನಿರ್ಬಂಧ ಝಡ್ ಮತ್ತು ಝಡ್ ಪ್ಲಸ್ ಸೆಕ್ಯೂರಿಟಿ ಇರುವ ವಾಹನಗಳಿಗೆ ಅನ್ವಯವಾಗುವುದಿಲ್ಲ.
ಟಿಂಟೆಡ್ ಫಿಲ್ಮ್ ತೆಗೆಸುವುದು ಎಲ್ಲಿ? : ಹಿಂಬದಿ ಮತ್ತು ಮುಂಬದಿಯ ಗ್ಲಾಸ್ ಶೇ.70ರಷ್ಟು ಮತ್ತು ಬದಿಯ ಗ್ಲಾಸ್ಗಳು ಶೇ.50ರಷ್ಟು ಬೆಳಕಿಗೆ ಅವಕಾಶ ಕೊಡದ ಗ್ಲಾಸುಗಳನ್ನು ತೆಗಸಲು ಕೆಲ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಶಿವಾಜಿನಗರದ ಬಿಆರ್ವಿ ಮೈದಾನ, ಆಡುಗೋಡಿ ಮತ್ತು ಮೈಸೂರು ರಸ್ತೆಯಲ್ಲಿರುವ ನಗರ ಶಸ್ತ್ರ ಮೀಸಲು ಪಡೆ ಮೈದಾನ, ಮಲ್ಲೇಶ್ವರದ ಆಟದ ಮೈದಾನ, ಜಯನಗರದ ಮಾಧವನ್ ಪಾರ್ಕ್ಗಳಲ್ಲಿ ಇವುಗಳನ್ನು ತೆಗೆಸಬಹುದು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಟೋಲ್ ಪ್ಲಾಜಾ, ಯಲಹಂಕ ಪೊಲೀಸ್ ಠಾಣೆ, ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್, ಕಂಠೀರವ ಕ್ರೀಡಾಂಗಣ, ಫ್ರೇಸರ್ ಟೌನ್ನಲ್ಲಿರುವ ಫುಟ್ಬಾಲ್ ಮೈದಾನಗಳಲ್ಲಿಯೂ ನಿರ್ಬಂಧಿತ ಟಿಂಟೆಡ್ ಗ್ಲಾಸ್ಗಳನ್ನು ತೆಗೆಸಲು ಅವಕಾಶ ಮಾಡಿಕೊಡಲಾಗಿದೆ. ಈ ಸೌಲಭ್ಯ ಉಚಿತ.
ಈ ಆದೇಶವನ್ನು ಎಷ್ಟು ಜನ ಪಾಲಿಸುತ್ತಾರೆ? ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯವಾಗಿದ್ದರೂ ಇಲ್ಲದೆ ವಾಹನ ಚಲಾಯಿಸುತ್ತಾರೆ. ಕುಡಿದು ಓಡಿಸುವುದನ್ನು ನಿಷೇಧಿಸಲಾಗಿದ್ದರೂ ಕುಡಿದೇ ಚಲಾಯಿಸುತ್ತಾರೆ. ಸಿಗ್ನಲ್ ಜಂಪ್ ಮಾಡುವುದು ಅಪರಾಧವೆಂದು ತಿಳಿದಿದ್ದರೂ ಜಂಪ್ ಮಾಡುತ್ತಾರೆ. ರಾತ್ರಿ ಹೈಬೀಮ್ ಬಳಸಿದರೆ ದಂಡ ಕಕ್ಕಿಸುತ್ತಾರೆ ಎಂದು ಗೊತ್ತಿದ್ದರೂ ಹೈಬೀಮ್ ಬಳಸುತ್ತಾರೆ. ಇದಕ್ಕೆ ಟಿಂಟೆಡ್ ಗ್ಲಾಸ್ ಕೂಡ ಸೇರ್ಪಡೆಯಾಗಲಿದೆಯೆ?
ದಂಡ ಎಷ್ಟು? : ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಂದ್ರ ಮೋಟಾರ್ ವೆಹಿಕಲ್ ಕಾಯ್ದೆಯ 177ನೇ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಮೇ 19ರ ನಂತರವೂ ಬಣ್ಣದ ಫಿಲ್ಮ್ ಬಳಸಿದರೆ 100 ರು. ದಂಡ ವಿಧಿಸಲಾಗುವುದು. ಎರಡನೇ ಬಾರಿ ಅಪರಾಧವೆಸಗಿದರೆ 300 ರು. ದಂಡ. ಮಾಡಿದ ತಪ್ಪು ತಿದ್ದಿಕೊಳ್ಳದೆ ಮೂರನೇ ಬಾರಿಯೂ ಇದೇ ಅಪರಾಧ ಎಸಗಿದರೆ 300 ರು. ದಂಡ ಮತ್ತು ಲೈಸೆನ್ಸ್ ಕಳೆದುಕೊಳ್ಳಲು ಸಿದ್ಧರಾಗಿರಬೇಕಾಗಿದೆ. ಆಯ್ಕೆ ವಾಹನ ಮಾಲಿಕರದ್ದು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications