ಹಿಂದೂಗಳಿಗೆ ಫೋನ್ ನಂಬರ್ ಕೊಟ್ಟ ತೊಗಾಡಿಯಾ

ಹಿಂದೂ ಐಕ್ಯ ವೇದಿಯಡಿ 'ಹಿಂದೂ ಶಕ್ತಿ ಸಂಗಮದಲ್ಲಿ' ಪಾಲ್ಗೊಳ್ಳಲು ಆಗಮಿಸಿದ್ದ ಪ್ರವೀಣ್ ತೊಗಾಡಿಯಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು. ಆ ವೇಳೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾವುದೇ ಭಾಗದಲ್ಲಿ ವಸತಿ, ದೇವರ ದರ್ಶನ, ಆಂಬುಲೆನ್ಸ್ ಮತ್ತು ಇತರ ಯಾವುದೇ ಅವಶ್ಯಕತೆ ಬಿದ್ದರೆ ತಕ್ಷಣ ಈ ನಂಬರಿಗೆ ಕರೆ ಮಾಡುವಂತೆ ಅವರು ವಿನಂತಿಸಿದರು.
ಕರ್ನಾಟಕದಲ್ಲಿ ಪ್ರವೀಣ ಕಾಮತ್ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸೇವೆ ಸಂಪೂರ್ಣ ಉಚಿತ. ಆದರೆ ವಸತಿ, ವಾಹನ, ದೇವರದರ್ಶನ ಮೊದಲಾದವುಗಳಿಗೆ ಸೂಕ್ತ ಹಣ ಪಾವತಿಸಬೇಕಾಗುತ್ತದೆ. ಎಲ್ಲಿಯೂ ಶೋಷಣೆ ನಡೆಯದಂತೆ ನ್ಯಾಯವಾದ ಸೇವೆ ದೊರಕಿಸಿಕೊಡಲಾಗುವುದು ಎಂದು ತೊಗಾಡಿಯಾ ತಿಳಿಸಿದರು.
ಜತೆಗೆ, [email protected] ಇಮೇಲ್ ವಿಳಾಸವನ್ನೂ ನೀಡಿದ್ದಾರೆ. ಪ್ರವೀಣ್ ತೊಗಾಡಿಯಾ ಅವರು ಶನಿವಾರ ಉಡುಪಿ ಮತ್ತು ಕುಂದಾಪುರಕ್ಕೂ ಭೇಟಿ ನೀಡಿದ್ದರು.












Click it and Unblock the Notifications