ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮರಾಜ 'ಮಾರ್ಗ' ಹಿಡಿದ ರವಿ, ಈಶ್ವರಪ್ಪ

By Mahesh
|
Google Oneindia Kannada News

KS Eshwarappa
ಬೆಂಗಳೂರು, ಮೇ.3: ಸದಾನಂದ ಗೌಡ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಫಿಕ್ಸ್ ಮಾಡಲು ಆಗದ ಈಶ್ವರಪ್ಪ ಅವರು ವಾರ, ಹದಿನೈದು ದಿನಗಳು ಎಂದು ಮುಂದೂಡುತ್ತಿದ್ದಾರೆ. ಈ ನಡುವೆ ಬಿಜೆಪಿ ನಿಷ್ಠ ಸಿಟಿ ರವಿ ಅವರು ಸಹಿ ಸಂಗ್ರಹ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಯಡಿಯೂರಪ್ಪ ಅವರ ನೆರಳಂತಿರುವ ಅವರು ಆಪ್ತರನ್ನು ದೂರ ಇಡಲು ಸಿಟಿ ರವಿ ಹಾಗೂ ಈಶ್ವರಪ್ಪ ಅವರು 'ಕಾಮರಾಜ ಮಾರ್ಗ' ಹಿಡಿದಿದ್ದಾರೆ ಎಂಬ ಸುದ್ದಿ ಬಂದಿದೆ.

ಕಷ್ಟ ಕಾಲ ಎದುರಿಸುತ್ತಿರುವ ಬಿಜೆಪಿಗೆ ಕಾಮರಾಜ ಮಾರ್ಗವೇ ಸೂಕ್ತ ಎಂದು ಈಶ್ವರಪ್ಪ ನಂಬಿದ್ದಾರೆ. ಈ ಯೋಜನೆಗೆ ಅಧ್ಯಕ್ಷ ಸಚಿವ ಸಂಪುಟದ ಹಿರಿಯ ಸಚಿವರೂ ಬೆಂಬಲ ಸೂಚಿಸುವ ಸಾಧ್ಯತೆಯಿದೆ. ಸಿಟಿ ರವಿ ಪತ್ರಕ್ಕೆ ಸಹಿ ಹಾಕಿರುವ 49 ಶಾಸಕರ ಬೆಂಬಲ ರಾಜೀನಾಮೆ ನೀಡಿದ ಪಕ್ಷದಲ್ಲಿ ಬಲವರ್ಧನೆಗೆ ಇದು ಅನಿವಾರ್ಯ ಎಂದು ಹೇಳಲು ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ. ಮುಂದಿನ ಸೋಮವಾರದೊಳಗೆ ಪಕ್ಷದ ಹಿರಿಯರ ಕೈಗೆ ಪತ್ರ ತಲುಪಲಿದೆ ಎಂದು ಸಿಟಿ ರವಿ ಹೇಳಿದ್ದಾರೆ.

ಈ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗಲು ಬಿಜೆಪಿಗೆ ಕರೆ ನೀಡಿರುವ ಈಶ್ವರಪ್ಪ, ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸೂಚಿಸಿದ್ದಾರೆ. ಸಚಿವ ಸಂಪುಟದಲ್ಲಿರುವ ಯಡಿಯೂರಪ್ಪ ಬೆಂಬಲಿತ ಸಚಿವರಿಗೆ ಕೊಕ್ ನೀಡುವುದು ಇದರ ಹಿಂದಿನ ಉದ್ದೇಶ ಎನ್ನಬಹುದು.

ಏನಿದು ಕಾಮರಾಜಮಾರ್ಗ?: ಖಂಡಿತವಾಗಿಯೂ ಇದು ರವಿ ಬೆಳೆಗೆರೆ ಅವರ ಪುಸ್ತಕದ ಕತೆಯಲ್ಲ. ದೇಶ ಕಂಡ ಉತ್ತಮ ರಾಜಕೀಯ ಮುತ್ಸದ್ಧಿ ಕೆ ಕಾಮರಾಜ್ ಅವರು ಅನುಸರಿಸಿದ ಮಾರ್ಗವೇ 'Kamaraj Plan' ಎಂದು ಹೆಸರುವಾಸಿಯಾಯಿತು. ಇದೇ ಯೋಜನೆಯನ್ನು ಈಗ ಈಶ್ವರಪ್ಪ ಅನುಸರಿಸಲು ಮುಂದಾಗಿದ್ದಾರೆ.

1963ರಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ರಾಜೀನಾಮೆ ನೀಡುವಂತೆ ಸೂಚಿಸಿ, ಪಕ್ಷದ ಬಲವರ್ಧನೆ, ಸಂಘಟನೆಗೆ ಬಳಸಿಕೊಳ್ಳಲಾಯಿತು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹ್ರೂ ಕೂಡಾ ಈ ಯೋಜನೆಗೆ ತಲೆ ಬಾಗಿದ್ದರು.

6 ಕೇಂದ್ರ ಸಚಿವರು ಹಾಗೂ 6 ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪಕ್ಷಕ್ಕಾಗಿ ದುಡಿಯಲು ಮುಂದಾದರು. ಲಾಲ್ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್ ಹಾಗೂ ಎಸ್ ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ನಂತರ ಎಐಸಿಸಿ ಅಧ್ಯಕ್ಷರಾದ ಕಾಮರಾಜ್ ಅವರು ನೆಹರೂ ನಿಧನ ನಂತರ ಉಂಟಾದ ರಾಜಕೀಯ ಅಸ್ಥಿರತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

English summary
BJP Presidnet KS Eshwarappa follows the foot steps of K Kamaraj by adopting his plan to solve BJP Crisis. CT Ravi Sign campagin is almost over and Senior leaders, Yeddyurappa aide ministers are likely to be asked to step down from the post to serve the party after Sadananda Gowda Cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X