ಲೋಕಪಾಲ್ ಜಾರಿಯಾದರೆ ಜೈಲುಗಳು ಭರ್ತಿ: ಕಲಾಂ

ಹೌದು, ನಮ್ಮ ರಾಜಕೀಯ ಪಕ್ಷಗಳು ಯಾವ hidden agenda ವನ್ನಿಟ್ಟುಕೊಂಡು ಈ ಕಲಾಂ ಸಾಹೇಬರನ್ನು ಮತ್ತೆ ರಾಷ್ಟ್ರಪತಿ ಗಾದಿಯಲ್ಲಿ ಕುಳ್ಳರಿಸಲು ಯತ್ನಿಸುತ್ತಿವೆಯೋ ಆದರೆ ಅವರು ಮಾತ್ರ - ನೋಡಿ ಈ ಜನ ಲೋಕಪಾಲ ಮಸೂದೆ ಅಂತ ಒಂದು ಇದೆಯಲ್ಲ, ಅದನ್ನೇನಾದ್ರೂ ಜಾರಿಗೆ ತಂದುಬಿಟ್ರೆ ಮುಗಿದ್ಹೋಯ್ತು ಈ ರಾಜಕಾರಣಿಗಳ ಕಥೆ. ನಮ್ಮ ದೇಶದ ಎಲ್ಲ ಜೈಲುಗಳೂ ಈ ಭ್ರಷ್ಟ ಮಂದಿಯಿಂದ ತುಂಬಿತುಳುಕಲಿವೆ - ಎಂದು ರಾಂಚಿಯಲ್ಲಿ ಚಿಕ್ಕಮಕ್ಕಳೊಂದಿಗೆ ಚಕ್ಕಮಕ್ಕಳ ಹಾಕಿಕೊಂಡು ಕಲಾಂ ತಾತಾ ಹೇಳಿದ್ದಾರೆ.
ಆದರೆ, 'ನಮಗದು ಬೇಡ. ಜೈಲುಗಳಿಗೆ ಹೋಗುವಂತಹ ತಪ್ಪನ್ನು ಯಾರೂ ಮಾಡುವುದು ಬೇಡ. ಅಂದರೆ ಲಂಚಕ್ಕೆ ಕೈಚಾಚುವುದು ಬೇಡ. ಭ್ರಷ್ಟಾಚಾರಕ್ಕೆ ಮಣೆ ಹಾಕುವುದು ಬೇಡ' ಎಂದು ಕಲಾಂ ಮಕ್ಕಳ ತಿಳಿ ಮನಸ್ಸುಗಳಿಗೆ ತಿಳಿಯ ಹೇಳಿದ್ದಾರೆ.
'ಆದ್ದರಿಂದ ಮಕ್ಕಳು ಮತ್ತು ಯುವಜನತೆ ಭ್ರಷ್ಟಾಚಾರವನ್ನು ನಿರ್ನಾಮ ಮಾಡುವುದಕ್ಕೆ ಸಂಕಲ್ಪ ತೊಡಬೇಕು. ನಮ್ಮ ಮನೆ-ಮನಗಳಲ್ಲಿ ಭ್ರಷ್ಟಾಚಾರ ಇಣುಕಬಾರದು. ದೊಡ್ಡವರು ಲಂಚ ಮುಟ್ಟುವುದು ನಿಮ್ಮ ಕಣ್ಣಿಗೆ ಬಿದ್ದರೆ ಹಾಗಲ್ಲ ಹೀಗೆ ಅಂತ ಹೇಳುತ್ತಾ ನಯವಾಗಿ ಅಂತಹ ಭ್ರಷ್ಟರನ್ನು ಸರಿ ದಾರಿಗೆ ತನ್ನಿ' ಎಂದೂ ಕಲಾಂ ಕಿವಿಮಾತು ಹೇಳಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications