ರೇಖಾ ಪಕ್ಕದಲ್ಲಿ ಕೂಡಲು ಜಯಾಗೆ ಇಷ್ಟವಿಲ್ಲವಂತೆ!

64 ವರ್ಷದ ಜಯಾ ಬಚ್ಚನ್ ಅವರು 91ನೇ ನಂಬರಿನ ಸೀಟಿನಿಂದ ಜಿಗಿದು 143ನೇ ಸೀಟಿಗೆ ಸ್ಥಳಾಂತರಗೊಂಡಿದ್ದಾರೆ. ಇದಕ್ಕೆ ಸಂಖ್ಯಾಸಾಸ್ತ್ರ ಖಂಡಿತ ಕಾರಣವಲ್ಲ. ಅದಕ್ಕೆ ಕಾರಣ, ಕೆಲ ದಿನಗಳ ಹಿಂದೆ ರಾಜ್ಯಸಭೆಗೆ ಆಯ್ಕೆಯಾಗಿರುವ 57 ವರ್ಷದ ಚಿರಯೌವನೆ ರೇಖಾ ಅವರು ಸೆಂಚುರಿಗೆ ಒಂದೇ ಒಂದು ನಂಬರ್ ಕಡಿಮೆಯಿರುವ ಸೀಟನ್ನು ಅಲಂಕರಿಸುತ್ತಿರುವುದು.
99ನೇ ಸೀಟಿನ ಹತ್ತಿರ ಕೂಡಲೂ ಇಷ್ಟಪಡದ ಜಯಾ ಬಚ್ಚನ್ ಸಭಾಧ್ಯಕ್ಷರಿಗೆ ಮನವಿ ಮಾಡಿಕೊಂಡು 143 ಅಂಕೆಯ ಸೀಟಿಗೆ ಸ್ಥಳಾಂತರಗೊಂಡಿದ್ದಾರೆ. ಜಯಾ ಮತ್ತು ರೇಖಾ ನಡುವಿನ ಹಾವು ಮುಂಗುಸಿ ದ್ವೇಷ ಎಲ್ಲರಿಗೂ ಗೊತ್ತಿರುವ ಸಂಗತಿ. 70ರ ದಶಕದಲ್ಲಿ ರೇಖಾ ಮತ್ತು ಅಮಿತಾಬ್ ಬಚ್ಚನ್ ನಡುವಿನ ಚಿತ್ರದಲ್ಲಿನ ಮತ್ತು ಚಿತ್ರದಾಚೆಗಿನ ಪ್ರೇಮ ಸಲ್ಲಾಪದಿಂದಾಗಿ ಜಯಾ ಮತ್ತು ಅಮಿತಾಬ್ ನಡುವಿನ ಸಂಬಂಧದಲ್ಲಿ ಬಿರುಕು ಕೂಡ ಬಿಡುವ ಹಂತ ತಲುಪಿತ್ತು.
ಯಶ್ ಚೋಪ್ರಾ ಅವರ ಸಂಗೀತಮಯ, ಪ್ರೇಮಮಯ ಚಿತ್ರ 'ಸಿಲ್ ಸಿಲಾ'ದಲ್ಲಿ ಅಮಿತಾಬ್ ಬಚ್ಚನ್, ರೇಖಾ ಮತ್ತು ಜಯಾ ಬಚ್ಚನ್ ನಟಿಸಿದ್ದರು. ಇದರ ಕಥೆ ಮೂವರ ತ್ರಿಕೋನ ಪ್ರೇಮದ ನಡುವೆಯೇ ಗಿರಿಕಿ ಹೊಡೆದಿತ್ತು. ಇದು ಮೂವರ ನಿಜ ಜೀವನದ ಕಥೆಯೇನೋ ಎಂಬಷ್ಟರ ಮಟ್ಟಿಗೆ ಪುಕಾರು ಎದ್ದಿತ್ತು. ಸ್ಟಾರ್ ಡಸ್ಟ್ ಪತ್ರಿಕೆ ಬಚ್ಚನ್ ಮತ್ತು ರೇಖಾ ಸಂಬಂಧದ ಬಗ್ಗೆ ಪುಟಗಟ್ಟಲೆ ಬರೆದಿತ್ತು. ಕೊನೆಗೆ ಬಚ್ಚನ್ ಮತ್ತು ರೇಖಾ ದೂರವಾಗಿದ್ದರೂ ಎರಡೂ ಕುಟುಂಬಗಳ ನಡುವಿನ ವೈಮನಸ್ಯವನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ ಎಂಬುದಕ್ಕೆ ರಾಜ್ಯಸಭೆಯಲ್ಲಿನ ಘಟನೆಯೇ ಸಾಕ್ಷಿ.
ಹಳೆಯ ಕಥೆ ಏನೇ ಇರಲಿ, ಏನೇ ಕಥೆಯನ್ನು ಹೇಳಲಿ ಅಮಿತಾಬ್ ಬಚ್ಚನ್ ಪಕ್ಕಾ ವೃತ್ತಿಪರರು ಎಂಬುದರಲ್ಲಿ ಎರಡು ಮಾತಿಲ್ಲ. ಈಗಲೂ ಕೂಡ ಅತ್ಯುತ್ತಮವಾದ ಕಥೆ ಸಿಕ್ಕರೆ ರೇಖಾ ಜೊತೆಗೆ ಮತ್ತೆ ಅಭಿನಯಿಸಲು ಸಿದ್ಧ ಎಂದು ಅಮಿತಾಬ್ ಬಚ್ಚನ್ ಹೇಳಿ ಮತ್ತೆ ಬೆಚ್ಚಿ ಬೀಳಿಸಿದ್ದಾರೆ. ಇದಕ್ಕೆ ಜಯಾ ಪ್ರತಿಕ್ರಿಯೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಂದ ಹಾಗೆ, ರಾಜ್ಯಸಭೆಗೆ ಆಯ್ಕೆಯಾಗಿರುವ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರಿಗೆ 103ನೇ ನಂಬರ್ ಸೀಟನ್ನು ನೀಡಲಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications