ಮೀರ್ ಸಾದಿಕ್ ಗಳ ಬಗ್ಗೆ ಪುಸ್ತಕ ರಿಲೀಸ್ : ಬಿಎಸ್ ವೈ

ಪ್ರಪಂಚದಲ್ಲಿ ಯಾವ ತಪ್ಪು ಮಾಡದಿದ್ದರೂ ಕೇವಲ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ ಏಕೈಕ ವ್ಯಕ್ತಿ ತಾನು. ತನ್ನನ್ನು ರಾಜಕೀಯವಾಗಿ ಮಟ್ಟ ಹಾಕುವ ಸಲುವಾಗಿ ವ್ಯವಸ್ಥಿತ ತಂತ್ರ ಹೆಣೆದಿದ್ದಾರೆ. ನನ್ನನ್ನು ರಾಜಕೀಯದಿಂದಲೇ ದೂರ ತಳ್ಳಲು ಕೆಲವರು ಮರ ಉರುಳಿಸಲು ಬುಡಕ್ಕೆ ಕೊಡಲಿ ಹಾಕಿದಂತೆ ತನ್ನನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಆದರೆ ನನ್ನನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಶಾಸಕರ ಬೆಂಬಲ : ಜನಪರ ಹೋರಾಟದಲ್ಲಿ ತೊಡಗಿಸಿಕೊಂಡವನು ನಾನು, ರಾಜ್ಯ ಸುತ್ತಿ ಜನರ ವಿಶ್ವಾಸ ಗಳಿಸಿದ್ದೇನೆ. ನಾನು ಏಕಾಂಗಿಯಲ್ಲ, ನನ್ನ ಜೊತೆಗೆ ಈಗಲೂ 70 ಮಂದಿ ಶಾಸಕರಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದ್ದು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಬಸವರಾಜು, ಅಪಘಾತ ಮಾಡಿ ತುರ್ತಾಗಿ ಯಡಿಯೂರಪ್ಪ ಕಾಣಲು ಬಂದ ಶಾಸಕ ಸುರೇಶ್ಗೌಡ, ಮಾಜಿ ಶಾಸಕ ಜೆಸಿ ಮಾಧುಸ್ವಾಮಿ, ಕಿರಣ್ಕುಮಾರ್, ಕೆರೆಗೋಡು ರಂಗಾಪುರದ ಪರದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಂಸದ ಮಲ್ಲಿಕಾರ್ಜುನಯ್ಯ ಮುಂತಾದವರಿದ್ದ ಗುಬ್ಬಿ ತಾಲೂಕಿನ ಮುದ್ದಪುರ ಗ್ರಾಮದ ಶನೈಶ್ಚರ ದೇವಾಲಯದ ನೂತನ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಯಡೀಯೂರಪ್ಪ ಕೇಂದ್ರ ಬಿಂದುವಾಗಿದ್ದರು.












Click it and Unblock the Notifications