ಮತ್ತೆ ಯಡಿಯೂರಪ್ಪ ಕಾಲೆಳೆದ ಅನಂತ ಕುಮಾರ್

ananth-kumar-gives-tong-to-bs-yeddyurappa-hubli
ಹುಬ್ಬಳ್ಳಿ, ಏ.30: ಅತ್ತ ಅಧಿಕಾರವಿಲ್ಲದೆ ಮೈ ಪರಚಿಕೊಳ್ಳುತ್ತಾ ವಿರೋಧಿಗಳನ್ನು ಕಂಡರೆ ರಕ್ತ ಕುದಿಯುತ್ತದೆ ಎಂಬ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಅವರ ಹಿತಶತ್ರು ಎಂದೇ ನಾಡಿನ ಜನತೆಗೆ ಪರಿಚಯವಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ಅನಂತ ಕುಮಾರ್ ಅವರು ಸ್ವಕ್ಷೇತ್ರದಲ್ಲಿ ಮತ್ತೊಮ್ಮೆ ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ಅದೂ ಗಣಿ ಲಂಚ ಪ್ರಕರಣವೊಂದರಲ್ಲಿ ಸೋಮವಾರ 'ಸುಪ್ರೀಂ ವಿಧಿಬರಹ' ಬರೆಯುವ ಮುನ್ನಾ ದಿನ ಅನಂತ ಕುಮಾರ್ ಈ ಮಾತು ಹೇಳಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಪುರಾತನ ಭ್ರಷ್ಟಾಚಾರ ಕೇಸೊಂದರಲ್ಲಿ ಬಂಗಾರು ಲಕ್ಷಣನನ್ನು ಪಕ್ಷ ನಡೆಸಿಕೊಂಡ ರೀತಿಯನ್ನು ನೆನಪಿಸಿಕೊಡುತ್ತಾ ಯಾವುದೇ ನಾಯಕನಿಗಾಗಲಿ ಇದೇ ಶಾಸ್ತಿ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ಭ್ರಷ್ಟಾಚಾರವನ್ನು ಬಲವಾಗಿ ವಿರೋಧಿಸುತ್ತದೆ. ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮುಖಂಡರಿಗೆ ದೋಷಮುಕ್ತರಾಗುವವರೆಗೂ ಪಕ್ಷದಲ್ಲಿ ಸ್ಥಾನಮಾನ ನೀಡಿದ ಉದಾಹರಣೆಗಳಿಲ್ಲ. ನೀಡುವುದೂ ಇಲ್ಲ ಎಂದು ಅನಂತ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಭ್ರಷ್ಟಾಚಾರದ ಆರೋಪ ಹೊತ್ತಿದ್ದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಲಿಲ್ಲ. ಯಡಿಯೂರಪ್ಪನವರೂ ಆರೋಪಕ್ಕೊಳಗಾಗಿದ್ದರಿಂದ ಸಿಎಂ ಸ್ಥಾನವನ್ನು ತ್ಯಜಿಸುವಂತಾಯಿತು. ಯಡಿಯೂರಪ್ಪ ದೋಷಮುಕ್ತರಾಗುತ್ತಾರೆ ಎಂಬ ವಿಶ್ವಾವಾಸವಿದೆ. ಆಗ ಅವರಿಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ಯೋಚಿಸಲಿದ್ದಾರೆ ಎಂದು ಅನಂತ ಕುಮಾರ್ ಭಾನುವಾರ ಹುಬ್ಬಳ್ಳಿಯಲ್ಲಿ ಹೇಳಿದರು.

ಆದರೆ ಇಲ್ಲಿ ಸುಮಾರು ನಾನೂರು ಕೋಟಿ ರೂ. ಹುಡ್ಕೋ ಪ್ರಕರಣ ಸಮ್ಮನೆ ಹಾಗೇ ಜ್ಞಾಪಕಕ್ಕೆ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+