ರೀ ಡೆಂಟಲ್ ಡಾಕ್ಟ್ರೆ, ಸೇಡಿಗೂ ಒಂದು ಮಿತಿ ಬೇಡ್ವಾ?

ಹಾಗಂತ, ಹಲ್ಲು ಉದುರಿಸಿಬಿಡ್ತಾರಾ? ಹೋಗಲಿ, ಹಲ್ಲು ಉದುರಿಸಲು ಪ್ರಯತ್ನವಾದರೂ ಮಾಡ್ತಾರಾ? ನೋ ಚಾನ್ಸ್. ಆಡಿದಂತೆ ನಡೆದುಕೊಳ್ಳುವವರು ಬಲು ಕಡಿಮೆ. ಆಡದೆ ಮಾಡುವವರು ವಿರಳಾತಿ ವಿರಳ. ಇಂಥ ವಿರಳಾತಿವಿರಳ 'ವೀರ' ಮಹಿಳೆ ಇಲ್ಲಿದ್ದಾಳೆ. ಸದ್ಯಕ್ಕೆ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿದ್ದಾಳೆ.
ಈ ಸ್ವಾರಸ್ಯಕರ ಸುದ್ದಿಯ ಹಿನ್ನೆಲೆ ಹೀಗಿದೆ. ಅನ್ನಾ ಮಾಕೊವಿಯಾಕ್ ಎಂಬ 34ರ ದಂತ ವೈದ್ಯೆ 45ರ ಹರೆಯದ ಮರೆಕ್ ಒಲ್ಜೆವಸ್ಕಿ ಎಂಬಾತನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆದರೆ, ಆತ ಮಾಡಿದ್ದೇನೆಂದರೆ, ಪ್ರೀತಿಸುವ ಹಾಗೆ ನಾಟಕವಾಡಿ ಕೊನೆಗೊಂದು ದಿನ, ನನಗೂ ನಿನಗೂ ಸಂಬಂಧವಿಲ್ಲ ಎಂದು ಕೈ ಎತ್ತಿಬಿಟ್ಟ.
ಬೇರೆಯವರಾಗಿದ್ದರೆ ಒಂದು ಬಿಟ್ಟಿರೋರು, ಇಲ್ಲ ಬಿಟ್ಟು ದೂರ ಹೋಗಿರೋರು. ಆದರೆ, ಪ್ರಥಮ ಚುಂಬನದಲ್ಲಿ ದಂತ ಭಗ್ನವಾದ ಅನ್ನಾ ಸುಮ್ಮನೆ ಬಿಡ್ತಾಳಾ? ಹಲ್ಲಿನ ನೋವಿನಿಂದ ಬಳಲುತ್ತಿದ್ದ ಮರೆಕ್, ಚಿಕಿತ್ಸೆಗೆಂದು ತನ್ನ ಮಾಜಿ ಪ್ರಿಯತಮೆಯ ಬಳಿ ಬಂದಿದ್ದಾನೆ. ಹೈಡೋಸ್ ಅರವಳಿಕೆ ಇಂಜೆಕ್ಷನ್ ಕೊಟ್ಟ ಅನ್ನಾ ಆತನ ಬಾಯಲ್ಲಿ ಒಂದೂ ಹಲ್ಲು ಇರದಂತೆ ಕಿತ್ತು ಬಿಸಾಡಿದ್ದಾಳೆ. ಹೀಗೂ ಉಂಟೆ!
ಇಷ್ಟಕ್ಕೇ ಸುಮ್ಮನಾಗದೆ. ಅರವಳಿಕೆ ನೀಡಿದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದ ಪ್ರಿಯತಮನಿಗೆ ಏನಾಗಿದೆ ಎಂದು ಕೂಡ ಗೊತ್ತಾಗದಂತೆ ಬಾಯಿಯನ್ನು ಮುಚ್ಚಿ, ದವಡೆ ಮತ್ತು ತಲೆ ಸೇರಿಸಿ ಪಟ್ಟಿ ಬಿಗಿದುಬಿಟ್ಟಿದ್ದಾಳೆ. ಅರವಳಿಕೆ ನೀಡಿದ್ದರಿಂದ ಏನೋ ಹೆಚ್ಚುಕಡಿಮೆ ಆಗುತ್ತಿದೆ ಎಂದು ಗೊತ್ತಾಗುತ್ತಿದ್ದರೂ ಆತನಿಗೆ ಏನೂ ಮಾಡಲಾಗಿಲ್ಲ. ಸೇಡಿಗೂ ಒಂದು ಮಿತಿ ಬೇಡವಾ?
ಅವಳಿಗೆ ಕೈಕೊಟ್ಟಿದ್ದು ನಿಜ. ಆದರೆ, ಆಕೆ ವೃತ್ತಿಪರತೆ ಮೆರೆಯುತ್ತಾಳೆ ಎಂದು ತಿಳಿದಿದ್ದೆ. ಹೀಗೆ ಮಾಡುತ್ತಾಳೆ ಎಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಆತ ಕಣ್ಣೀರು ಹಾಕಿದ್ದಾನೆ. ಕಥೆ ಇಲ್ಲಿಗೇ ಮುಗಿದಿಲ್ಲ. ಆತ ಬಾಯಲ್ಲಿ ಒಂದೂ ಹಲ್ಲು ಇರದಿದ್ದರಿಂದ ಹೊಸ ಗೆಳತಿ ಕೂಡ ಟಾಟಾ ಹೇಳಿಬಿಟ್ಟಿದ್ದಾಳೆ. ವಿಚಾರಣೆಯನ್ನು ಎದುರಿಸುತ್ತಿರುವ ಅನ್ನಾಳ ಆರೋಪ ಸಾಬೀತಾದರೆ ಜೈಲಲ್ಲಿ ರಾಗಿ ಬೀಸುವುದು ಖಚಿತ.
ಪ್ರೀತಿಸುವುದು, ಹೊಂದಾಣಿಕೆಯಾಗದಿದ್ದರೆ ಬೇರ್ಪಡುವುದು ಅತ್ಯಂತ ಸಹಜವಾದ ಕ್ರಿಯೆ. ಇದೇನೋ ಪೋಲಂಡ್ನಲ್ಲಿ ನಡೆದ ವಿದ್ಯಮಾನ. ಅಂಗಿ ಬದಲಾಯಿಸಿದಂತೆ ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಕಟ್ಟಿಕೊಳ್ಳುವುದು ಹೊಸದೂ ಅಲ್ಲ. ಇಂಥದೇ ಘಟನೆಗಳು ಭಾರತದಲ್ಲಾದರೆ, ಪ್ರೀತಿ ಪ್ರೇಮ ಪರಿತ್ಯಕ್ತಳಾದ ಹುಡುಗಿ ಏನು ಮಾಡಬೇಕು?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications