ಸ್ವಾಮೀಜಿಗೆ ಭಾರತ ರತ್ನ(?)- ಬರಗೆಟ್ಟ ದುರ್ಗಕ್ಕೇನು?

ಸೋನಿಯಾ ಮೇಡಂ, ನಾಡಿನ ಪ್ರಬಲ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ತುಮಕೂರು ಭೇಟಿ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿ ನಡೆದಾಡುವ ದೇವರಿಗೆ ಬರ್ತ್ ಡೆ ಗಿಫ್ಟ್ ಆಗಿ ಭಾರತ ರತ್ನ ಘೋಷಿಸುವ ಸಾಧ್ಯತೆಯೂ ಇದೆ. ಆದರೆ ನಮ್ಮ ಬರಗೆಟ್ಟ ಒನಕೆ ಓಬವ್ವನ ಜಿಲ್ಲೆಗೆ ಸೋನಿಯಾ ಗಿಫ್ಟ್ ಏನು ಎಂದು ಸಹಜ ಕುತೂಹಲದಿಂದ ಕೇಳುತ್ತಿಲ್ಲ.
ಬದಲಿಗೆ ಬರಡು ನೆಲದಲ್ಲಿ ಜನರ 'ಕೈ' ಹಿಡಿಯಲು ( ಆ ನಂತರ ಜನ 'ಕೈ' ಹಿಡಿಯುವಂತಾಗಲು) ಮೇಡಂ ಏನು ಗಿಫ್ಟ್ ನೀಡಲಿದ್ದಾರೆ ಎಂದು ಇಲ್ಲಿನ ಜನ ಕೇಳುವಂತಾಗಿದೆ.
ಅನಾದಿ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮೇಡಂ ಹಸಿರು ನಿಶಾನೆ ತೋರಿದರೆ ನಮ್ಮಗಳ ಬದುಕು ಹಸಿರಾದೀತು. ಪಕ್ಷದ ನಿಧಿಯಿಂದಲೋ ಅಥವಾ ಪ್ರಧಾನ ಮಂತ್ರಿಗಳ ಬರ ಪರಿಹಾರ ನಿಧಿಯಿಂದಲೋ ಎಲ್ಲಿಂದಲೋ ಒಟ್ನಿನಲ್ಲಿ ಸೋನಿಯಾ ಮೇಡಂ ಈ ಯೋಜನೆಗಳಿಗಾಗಿ ( ಭದ್ರಾ ಮೇಲ್ದಂಡೆ ಯೋಜನೆ) ಒಂದಷ್ಟು ಇಡಿಗಂಟು ನೀಡಿದರೆ ನಿಜಕ್ಕೂ ಅದು ಸಂಭಾವ್ಯ ಭಾರತ ರತ್ನ ಪುರಸ್ಕಾರಕ್ಕಿಂತಲೂ ನೂರುಪಟ್ಟು ಪರಿಣಾಮಕಾರಿಯಾಗಲಿದೆ ಎಂದು ದುರ್ಗದ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ ಮೇಡಂ ಶನಿವಾರ ಬೆಳಗ್ಗೆ 8.30ಕ್ಕೆ ಇಲ್ಲಿನ ಗ್ರಾಮವೊಂದಕ್ಕೆ (ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ) ಸಾಂಕೇತಿಕವಾಗಿ ಕೇವಲ ಅರ್ಧ ಗಂಟೆ ಭೇಟಿ ನೀಡುತ್ತಿರುವುದನ್ನು ಗಮನಿಸಿದರೆ ಸೋನಿಯಾರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು ಎಂದು ಇದೇ ದುರ್ಗದ ಮಂದಿ ಅದಾಗಲೇ ತರ್ಕಿಸಿ, ತಾವಾಯಿತು ತಮ್ಮ ಪಾಡಾಯಿತು ಎಂದು ತಲೆ ಮೇಲೆ ತಣ್ಣನೆ ಬಟ್ಟೆ ಮಡಗಿಕೊಂಡು ತಣ್ಣಗೆ ಪ್ರತಿಕ್ರಿಯಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications