ಲಿಂಗಾಯತ ಮತ 'ಕೈ'ವಶಕ್ಕೆ ಸೋನಿಯಾ 'ಶ್ರೀ'ಕಾರ

ಶನಿವಾರ ಸಿದ್ದಗಂಗಾ ಮಠದಲ್ಲಿ ನಡೆಯುವ ಸಿದ್ಧಗಂಗಾ ಶ್ರೀಗಳ ಜಯಂತ್ಯುತ್ಸವದಲ್ಲಿ ಸೋನಿಯಾ ಪಾಲ್ಗೊಳ್ಳುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ರಾಜಕೀಯದಲ್ಲಿ ಗಣನೀಯ ಪಾತ್ರವಹಿಸುವ ಲಿಂಗಾಯತ ಮತ ಬೇಟೆಗೆ ಅವರು ಶ್ರೀಕಾರ ಹಾಕಲಿದ್ದಾರೆ.
ಅತ್ತ ಲಿಂಗಾಯತರ ಅಧಿನಾಯಕ ಎಂದು ಮುದ್ರೆಯೊತ್ತಿರುವ ಯಡಿಯೂರಪ್ಪ ಅವರು ಏಕಾಂಗಿಯಾಗುತ್ತಿರುವ ಸಂದರ್ಭದಲ್ಲಿ ಸೋನಿಯಾ ಅವರ ಈ ನಡೆ ಕುತೂಹಲಕಾರಿಯಾಗಿದೆ. ಅದಕ್ಕೂ ಮುನ್ನ ಅನಾಮತ್ತಾಗಿ ಯಡಿಯೂರಪ್ಪ ಅವರನ್ನೇ ಪಕ್ಷದತ್ತ ಸೆಳೆದುಕೊಂಡರೆ ಹೇಗೆ ಎಂದು ಸೋನಿಯಾ ಪ್ರಯತ್ನಿಸಿದರಾದರೂ ರಾಜ್ಯ ಕಾಂಗ್ರೆಸ್ ಮಾತಿಗೆ ಮಣೆ ಹಾಕಿ, ತಮ್ಮತ್ತ ಸುಳಿದಾಡಲು ಹವಣಿಸಿದ ಯಡಿಯೂರಪ್ಪ ಅವರನ್ನು ದೂರವಿಟ್ಟರು.
ಅದರ ಬದಲಿಗೆ 'ಕಳಂಕಿತ ಯಡಿಯೂರಪ್ಪ ಅವರನ್ನು 'ಕೈ'ಬಿಟ್ಟು ನಮ್ಮೂರಲ್ಲೇ ಇರುವ ಪ್ರಭಾವಿ ಮಠಕ್ಕೆ ನಡೆದುಬನ್ನಿ. ಮುಂದಿನದೆಲ್ಲ ನಾನು ನೋಡಿಕೊಳ್ಳುತ್ತೇನೆ' ಎಂದು ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು ಹೇಳಿದ್ದೇ ತಡ ಸೋನಿಯಾ ಮೇಡಂ Yes ಎಂದು ಡಾ. ಶಿವಕುಮಾರ ಸ್ವಾಮಿಗಳತ್ತ 'ಹಸ್ತ'ಚಾಚಿದ್ದಾರೆ.
ಇದರಿಂದ ಧನ-ಜನ-ಮತ-ಬಲ ಹೊಂದಿರುವ ವೀರಶೈವ ಮಠಗಳ ಅಂಗಳದಲ್ಲಿ ಕೈ ಕಲರವ ಕೇಳಿಬರಲಿದೆ. ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ಸಿನಲ್ಲಿ ಮತ್ತೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯೂ ದೊರೆತಿದೆ. ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನರಿಗೆ ಈ ಬಾರಿ ಪ್ರಭಾವಿ ಸ್ಥಾನ ಕಲ್ಪಿಸುವುದಂತೂ ನಿಚ್ಚಳವಾಗಿದೆ.
ರಾಜ್ಯ ಕಾಂಗ್ರೆಸ್ಸೂ ಸಹ ಇದನ್ನೇ ಬಯಸುತ್ತಿದೆ. ಲಿಂಗಾಯತ ಸಮುದಾಯ ಕಾಂಗ್ರೆಸ್ಸಿನಿಂದ ವಿಮುಖಗೊಂಡು ಅನೇಕ ವರ್ಷಗಳೇ ಕಳೆದುಹೋಗಿವೆ. ರಾಜ್ಯದ ಏಳೂವರೆ ಕೋಟಿ ಜನರಲ್ಲಿ ಶೇ. 18 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಸಮುದಾಯ ಬಿಜೆಪಿಯತ್ತ ವಾಲಿರುವುದನ್ನು ಮತ್ತೆ ತನ್ನತ್ತ ಸೆಳೆಯುವುದು ಕಾಂಗ್ರೆಸ್ ಸದ್ಯದ ಗುರಿಯಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications