ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ?

By Srinath
|
Google Oneindia Kannada News

siddaganga-swamiji-may-get-bharat-ratna
ತುಮಕೂರು: ಏ.27: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ನಾಳೆ ಶನಿವಾರ ತುಮಕೂರಿಗೆ ಭೇಟಿ ನೀಡಿ, ಡಾ. ಶಿವಕುಮಾರ ಸ್ವಾಮಿಗಳಿಗೆ 105 ಗುರುವಂದನೆ ಸಲ್ಲಿಸಲಿದ್ದಾರೆ. ಇದರ ಜತೆಜತೆಗೆ ರಾಜ್ಯದಲ್ಲಿ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಸೋನಿಯಾ ಮೇಡಂ ಕಂಕಣಬದ್ಧರಾಗಿದ್ದಾರೆ.

ಮೊದಲ ಪ್ರಯತ್ನವಾಗಿ ದೊಡ್ಡದಕ್ಕೇ 'ಕೈ' ಹಾಕಿದ್ದಾರೆ. ಭಾರಿ ಸಂಖ್ಯೆಯ ಲಿಂಗಾಯತರ ಮತಗಳನ್ನು ಪಕ್ಷದತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸೋನಿಯಾ ಅವರು ನಾಳೆ ಮಹತ್ವದ ನಿರ್ಣಯ ಪ್ರಕಟಿಸುವ ಸಾಧ್ಯತೆಯಿದೆ. ಶನಿವಾರ ಬೆಳಗ್ಗೆ 12 ಗಂಟೆಗೆ ಸಿದ್ದಗಂಗಾ ಮಠದಲ್ಲಿ ನಡೆಯುವ ಜಯಂತ್ಯುತ್ಸವದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರು ಮಹಾತಪಸ್ವಿ, ನಡೆದಾಡುವ ದೇವರು ಎಂದು ಜನಜನಿತವಾಗಿರುವ ಸಿದ್ಧಗಂಗಾ ಶ್ರೀಗಳಿಗೆ ಅವರ ಇಡೀ ಭಕ್ತ ಸಮೂಹ ಬಯಸುವಂತೆ ಕೇಂದ್ರ ಸರಕಾರದ ವತಿಯಿಂದ 'ಭಾರತ ರತ್ನ' ಪ್ರಕಟಿಸುವ ಆಶಯವಿದೆ.

ಇದರೊಂದಿಗೆ ನಾಡಿನ ಪ್ರಬಲ ಲಿಂಗಾಯತ ಸಮುದಾಯದ ಕಾಂಗ್ರೆಸ್ ಪಕ್ಷದೊಂದಿಗೆ ಇಲ್ಲ ಎಂಬ ಭಾವನೆ ನಿವಾರಣೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

English summary
AICC president Sonia Gandhi who will visit Tumkur on April 28 may announce Bharat Ratna for Siddaganga Mutt seer Sri Shivakumara Swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X