ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ಚಿನ್ನದ ವ್ಯಾಪಾರಿಯ ದರೋಡೆ
ನಗರದ ಹೃದಯ ಭಾಗದಲ್ಲಿರುವ ಕಿಲಾರಿ ರಸ್ತೆಯ ಆನಂದ್ ಜ್ಯೂವೆಲ್ಲರ್ಸ್ ಮಾಲೀಕ ಪ್ರಕಾಶ್ ಅವರ ಮೇಲೆ ದುಷ್ಕರ್ಮಿಗಳು ಸಮಯ ಸಾಧಿಸಿ, ಹಲ್ಲೆ ನಡೆಸಿದ್ದಾರೆ. ಕಣ್ಣಿಗೆ ದ್ರಾವಣ ಸುರಿದಿದ್ದಾರೆ. ಅದೇ ವೇಳೆ ಅವರ ಕೈಯಲ್ಲಿದ್ದ ನಗದು ತುಂಬಿದ್ದ ಬ್ಯಾಗನ್ನು ಹೆಲ್ಮೆಟ್ ಧರಿಸಿದ್ದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೆಲ್ಲ ಇಂದು ಬಳಗ್ಗೆ 10.30ರಲ್ಲಿ ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷಯ ತೃತೀಯಾ ಸಂಬಂಧ ಇಂದು ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ವ್ಯಾಪಾರಿಗಳೂ ತಮ್ಮ ತಮ್ಮ ಭದ್ರತೆಯಲ್ಲಿದ್ದಾರೆ. ಆದಾಗ್ಯೂ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ತಂದಿದೆ. ಗ್ರಾಹಕರು ಈ ಬಗ್ಗೆ ವಿಶೇಷವಾಗಿ ಎಚ್ಚರವಹಿಸುವುದು ಒಳ್ಳೆಯದು.
Comments
English summary
A Bangalore gold merchant Prakash is robbed of Rs. 12 lakh a short while ago in Bangalore today (April 24).
Story first published: Tuesday, April 24, 2012, 11:36 [IST]