ಬೆಂಗಳೂರು ಚಿನ್ನದ ವ್ಯಾಪಾರಿಯ ದರೋಡೆ
ಬೆಂಗಳೂರು,
ಏ. 24: ಅಕ್ಷಯ ತೃತೀಯಾ ದಿನವಾದ ಇಂದು ನಗರದ ಚಿನ್ನದ ವ್ಯಾಪಾರಿಯೊಬ್ಬರಿಗೆ ಭಾರಿ ಆಘಾತವಾಗಿದೆ. ಅಕ್ಷಯ ತೃತೀಯಾ ನಿಮಿತ್ತ ಉತ್ತಮ ವ್ಯಾಪಾರದ ಭರಾಟೆಯಲ್ಲಿದ್ದ ಪ್ರಕಾಶ್ ಗಾಡಗಿ 12 ಲಕ್ಷ ರುಪಾಯಿ ನಗದನ್ನು ಬ್ಯಾಗಿನಲ್ಲಿಟ್ಟುಕೊಂಡು ಅಂಗಡಿಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಈ ದರೋಡೆ ನಡೆದಿದೆ. id="toptextpromo">ನಗರದ
ಹೃದಯ ಭಾಗದಲ್ಲಿರುವ ಕಿಲಾರಿ ರಸ್ತೆಯ ಆನಂದ್ ಜ್ಯೂವೆಲ್ಲರ್ಸ್ ಮಾಲೀಕ ಪ್ರಕಾಶ್ ಅವರ ಮೇಲೆ ದುಷ್ಕರ್ಮಿಗಳು ಸಮಯ ಸಾಧಿಸಿ, ಹಲ್ಲೆ ನಡೆಸಿದ್ದಾರೆ. ಕಣ್ಣಿಗೆ ದ್ರಾವಣ ಸುರಿದಿದ್ದಾರೆ. ಅದೇ ವೇಳೆ ಅವರ ಕೈಯಲ್ಲಿದ್ದ ನಗದು ತುಂಬಿದ್ದ ಬ್ಯಾಗನ್ನು ಹೆಲ್ಮೆಟ್ ಧರಿಸಿದ್ದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೆಲ್ಲ ಇಂದು ಬಳಗ್ಗೆ 10.30ರಲ್ಲಿ ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಕ್ಷಯ
ತೃತೀಯಾ ಸಂಬಂಧ ಇಂದು ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ವ್ಯಾಪಾರಿಗಳೂ ತಮ್ಮ ತಮ್ಮ ಭದ್ರತೆಯಲ್ಲಿದ್ದಾರೆ. ಆದಾಗ್ಯೂ ಇಂತಹ ಘಟನೆ ನಡೆದಿರುವುದು ಆಶ್ಚರ್ಯ ತಂದಿದೆ. ಗ್ರಾಹಕರು ಈ ಬಗ್ಗೆ ವಿಶೇಷವಾಗಿ ಎಚ್ಚರವಹಿಸುವುದು ಒಳ್ಳೆಯದು.











Click it and Unblock the Notifications