ಅಗ್ನಿಶಾಮಕ ಸಿಬ್ಬಂದಿಗೆ ಸಿಹಿ ಸುದ್ದಿ ಕೊಟ್ಟ ಡಿವಿಎಸ್
ನಗರದ ಬನ್ನೇರುಘಟ್ಟ ರಸ್ತೆಯಲ್ಲಿನ ಆರ್.ಎ. ಮುಂಡ್ಕುರ್ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಅಕಾಡಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.
ಅಗ್ನಿ ದುರಂತ ಸಂಭವಿಸಿದ ವೇಳೆ ಜೀವದ ಹಂಗು ತೊರೆದು ಕೆಲಸ ಮಾಡುವ ಸಿಬ್ಬಂದಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಸರಕಾರದ ಜವಾಬ್ದಾರಿ. ಹೊಸ ಅಗ್ನಿಶಾಮಕ ಠಾಣೆಗಳನ್ನು ತೆರೆಯಲು ಹಾಗೂ ಸಿಬ್ಬಂದಿಗಳಿಗೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಸರಕಾರ 40 ಕೋಟಿ ರೂ.ಹಣ ನೀಡಿದೆ ಎಂದರು.
1400 ಸಿಬ್ಬಂದಿ ನೇಮಕಕ್ಕೆ ಕ್ರಮ: ಹಲವರ ಜೀವನದ ರಕ್ಷಣೆ ಹಾಗೂ ಕೋಟ್ಯಂತರ ರೂಪಾಯಿ ಮೊತ್ತದ ಅಪಾರ ಆಸ್ತಿ-ಪಾಸ್ತಿ ಉಳಿಸುವ ಮೂಲಕ ಜನ ಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಏಕೈಕ ಸಂಸ್ಥೆ ಅಗ್ನಿ ಶಾಮಕ ಇಲಾಖೆ. ವೃತ್ತಿಪರತೆ, ನಿಷ್ಠೆ ಹಾಗೂ ತ್ಯಾಗಕ್ಕೆ ಇಲಾಖೆ ಮಾದರಿ ಎಂದು ಸದಾನಂದ ಕೊಂಡಾಡಿದರು.
ಕರ್ತವ್ಯ
ನಿರತ
ಸಿಬ್ಬಂದಿ
ಅಸುನೀಗಿದವರಿಗೆ
ಹೆಚ್ಚಿನ
ಪರಿಹಾರ
ನೀಡಲಾಗುವುದು.
ಇಲಾಖೆಯ
ಆಧುನೀಕರಣಕ್ಕೆ
ಹೆಚ್ಚಿನ
ಒತ್ತು
ನೀಡಲಾಗಿದೆ.
ಅಗ್ನಿಶಾಮಕ
ಇಲಾಖೆಗೆ
1,400ಕ್ಕೂ
ಹೆಚ್ಚು
ಸಿಬ್ಬಂದಿಯನ್ನು
ನೇಮಕಕ್ಕೆ
ಕ್ರಮ
ಕೈಗೊಳ್ಳಲಾಗಿದೆ.
ಅಗ್ನಿ
ಅನಾಹುತ
ಸಂಭವಿಸಿದ
ಸಂದರ್ಭದಲ್ಲಿ
ಅದನ್ನು
ಸಮರ್ಥವಾಗಿ
ನಂದಿಸಲು
ಸರಕಾರ
ಇಲಾಖೆಗೆ
ಆಧುನಿಕ
ಉಪಕರಣಗಳನ್ನು
ಒದಗಿಸುತ್ತಿದೆ
ಎಂದು
ನುಡಿದರು.
ಸಮಾರಂಭದಲ್ಲಿ
ಗೃಹ
ಸಚಿವ
ಆರ್.ಅಶೋಕ್,
ರಾಜ್ಯ
ಪೊಲೀಸ್
ಮಹಾ
ನಿರ್ದೇಶಕ
ಅಬ್ದುಲ್
ರೆಹ್ಮನ್
ಇನ್ಫಾಂಟ್,
ಐಜಿಪಿ
ಶಿವಕುಮಾರ್
ಉಪಸ್ಥಿತರಿದ್ದರು.