ಸುವರ್ಣ ನ್ಯೂಸ್ ವಿರುದ್ಧ ಎಫ್ಐಆರ್ ದಾಖಲು
ಮಂಗಳೂರು,ಏ.
19: ಯಾಕೋ ಮಾಧ್ಯಮಗಳ ವಿರುದ್ಧ ಪೊಲೀಸು, ಕೋರ್ಟು ಕೇಸುಗಳು ಹೆಚ್ಚಾಗುತ್ತಿವೆ. ಖಂಡಿತಾ ಇದು ಒಳ್ಳೆಯ ಲಕ್ಷಣವಲ್ಲ. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಸುವರ್ಣ ಚಾನೆಲ್ ವಿರುದ್ಧ ಇಲ್ಲಿನ ಜೆಎಂಎಫ್ಸಿ 2 ನೇ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಪ್ರಕರಣದ ಸಂಬಂಧ FIR ದಾಖಲಿಸುವಂತೆ ನ್ಯಾಯಾಲಯವು ಬಂದರು ಪೊಲೀಸ್ ಠಾಣೆಗೆ ಆದೇಶಿಸಿದೆ. id="toptextpromo">ಈ
ಹಿನ್ನೆಲೆಯಲ್ಲಿ ಬುಧವಾರ ಬಂದರು ಪೊಲೀಸ್ ಠಾಣೆಯಲ್ಲಿ ಸುವರ್ಣ ನ್ಯೂಸ್ ಚಾನೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅಶ್ಲೀಲ ಚಿತ್ರ ಪ್ರದರ್ಶನ ಮತ್ತು ದುರುದ್ದೇಶ ಪೂರ್ವಕವಾಗಿ ಸುಳ್ಳು ವರದಿ ಪ್ರಸಾರ ಮಾಡಿದ ಆರೋಪವನ್ನು ಚಾನೆಲ್ ಮೇಲೆ ಹೊರಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ನ್ಯಾಯ
ಬೇಕು
-ಪಾಲೆಮಾರ್:
ಮಾಹಿತಿ
ತಂತ್ರಜ್ಞಾನ
ಕಾಯ್ದೆಯಡಿ
ಅಪರಾಧ
ಎಸಗಲಾಗಿದೆ.
'ಸುಳ್ಳು
ವರದಿ
ಪ್ರಸಾರ
ಮಾಡಿದ್ದರಿಂದ
ತಾನು
ಸಚಿವ
ಸ್ಥಾನವನ್ನು
ಕಳೆದುಕೊಳ್ಳುವಂತಾಯಿತು.
ಜನರಿಗೆ
ತನ್ನ
ಮೇಲೆ
ತಪ್ಪು
ಅಭಿಪ್ರಾಯ
ಬರುವಂತಾಗಿದೆ.
ತನಗೆ
ನ್ಯಾಯ
ಸಿಗಬೇಕು'
ಎಂದು
ಪಾಲೆಮಾರ್
ಅವರು
ನ್ಯಾಯಾಲಯಕ್ಕೆ
ಸಲ್ಲಿಸಿದ
ದೂರಿನಲ್ಲಿ
ತಿಳಿಸಿದ್ದರು.
ನ್ಯಾಯಾಲಯದಲ್ಲಿ
ಕೃಷ್ಣ
ಪಾಲೆಮಾರ್
ಪರವಾಗಿ
ವಕೀಲರಾದ
ಪಿ.ಪಿ.
ಹೆಗ್ಡೆ
ಅವರು
ವಾದ
ಮಂಡಿಸಿದರು.












Click it and Unblock the Notifications