ಶಾಸಕರು ನನ್ನ ಜೊತೆ ಇದ್ದಾರೆ, ಬಿಎಸ್ ವೈ ಖುಷಿ

ಜನರಿಗೆ ಪ್ರೀತಿ ವಿಶ್ವಾಸ ತೋರಿಸಿದರೆ ಸಾಕು ಅವರು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಪಕ್ಷವನ್ನು ಕಟ್ಟಿ ಬೆಳೆಸಿದರೂ ಕಳೆದ 7 ತಿಂಗಳಿನಿಂದ ಅಧಿಕಾರದಿಂದ ವಂಚಿತವಾಗಿದ್ದೇನೆ. ಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಾನಾಗಿ ಹೈಕಮಾಂಡ್ ಬಳಿಗೆ ಮತ್ತೆ ಹೋಗುವುದಿಲ್ಲ, ಅವರು ಕರೆದರೆ ನೋಡೋಣ ಎಂದರು.
ನನಗೆ ಯಾವುದೇ ಶಕ್ತಿ ಪ್ರದರ್ಶನ ಮಾಡಿ ಯಾರನ್ನೋ ಮೆಚ್ಚಿಸುವ ಅಗತ್ಯವಿಲ್ಲ. ಜನರಿಗೆ ಯಡಿಯೂರಪ್ಪ ಏನು ಎಂಬುದು ತಿಳಿದಿದೆ ಎಂದು ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ರೂಪಿಸಿ, ಸಿದ್ಧತೆ ಉಸ್ತುವಾರಿಯಾಗಿರುವ ಆರ್ ಎಂ ಮಂಜುನಾಥಗೌಡ, ಉದ್ಯಮಿ ರುದ್ರೇಗೌಡರನ್ನು ಯಡಿಯೂರಪ್ಪ ಅಭಿನಂದಿಸಿದರು. ಯಡಿಯೂರಪ್ಪ ಅವರ ಜೊತೆ ಅವರ ಮಗ ಸಂಸದ ಬಿವೈ ರಾಘವೇಂದ್ರ ಕೂಡಾ ಇದ್ದರು.
ಬೆಂಗಳೂರಿನಲ್ಲಿ ನಡೆದಿರುವ ನಾರಿ ಶಕ್ತಿ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟಿರುವ ಸಿಎಂ ಸದಾನಂದ ಗೌಡರು ಶಿವಮೊಗ್ಗದ ಬಿಎಸ್ ವೈ ಸನ್ಮಾನ ಕಾರ್ಯಕ್ರಮಕ್ಕೆ ಸದಾನಂದ ಗೌಡರು ಬರ್ತಾರಾ? ನಿರೀಕ್ಷಿಸಿ...












Click it and Unblock the Notifications