ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕ ತನ್ನ ಗೆಳೆಯನನ್ನೇ ಇರಿದು ಕೊಂದ

By Mahesh
|
Google Oneindia Kannada News

Murder in Madiwala
ಬೆಂಗಳೂರು, ಮಾ. 27: ಕುಡಿತದ ಅಮಲಿನಲ್ಲೂ ಸಾಲದ ವಿಷಯವನ್ನು ನೆನಪಿಸಿಕೊಂಡ ಕುಡುಕನೊಬ್ಬ ತನ್ನ ಗೆಳೆಯನನ್ನೇ ಇರಿದು ಕೊಂದ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುಡಿದಾಗ ಎಲ್ಲವೂ ಮರೆತು ಹೋಗುತ್ತದೆ ಎನ್ನುತ್ತಾರೆ. ಆದರೆ, ಆರೋಪಿ ವೆಂಕಟೇಶ ಮಾತ್ರ ಗೆಳೆಯ ರಾಮುವನ್ನು ಕೊಂದಿದ್ದು ಸಾಲ ತೀರಸಲಿಲ್ಲ ಎಂಬ ಕಾರಣಕ್ಕೆ ಎಂದು ತಿಳಿದು ಬಂದಿದೆ.

ಬಿಟಿಎಂ ಲೇಔಟ್‌ನ ಬಾರ್ ವೊಂದರಲ್ಲಿ ಕೊಲೆಯಾದ ವ್ಯಕ್ತಿ ಬಿಟಿಎಂ ಲೇಔಟ್‌ನ ನಿವಾಸಿ ಆಟೋರಿಕ್ಷಾ ಚಾಲಕ ರಾಮು (28) ಹಾಗೂ ವೆಂಕಟೇಶ್ ಇಬ್ಬರು ಯುಗಾದಿ ನಂತರದ ಸಂಭ್ರಮವನ್ನು ಆಚರಿಸುತ್ತಿದ್ದರು.

ಕೆಲವು ರೌಂಡ್ ಡ್ರಿಂಕ್ಸ್ ನಂತರ ಸಾಲದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ವೆಂಕಟೇಶ್ ರಾಮುವಿನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ರಾಮು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ವೆಂಕಟೇಶ್‌ನನ್ನು ಬಂಧಿಸಿರುವ ಮಡಿವಾಳ ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

English summary
A heavily drunkard person has nabbed his friend and killed in BTM Layout in Madiwala Police Station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X