ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಕೋಟಿ ರು ರಾಜ್ಯ ಬಜೆಟ್ ಮುಖ್ಯಾಂಶಗಳು

By Mahesh
|
Google Oneindia Kannada News

Sadananda Gowda
ವಿಧಾನಸಭೆ, ಮಾ.21: ರಾಜ್ಯದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಪ್ರಪ್ರಥಮ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ.

ಕೃಷಿ, ಮೀನುಗಾರಿಕೆ, ನೀರಾವರಿ, ಹೈನುಗಾರಿಕೆಗೆ ಆದ್ಯತೆನೀಡಲಾಗಿದೆ. 6 ಬಾರಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರು ಜಾರಿಗೆ ಬಂದ ಕೃಷಿ ಬಜೆಟ್ ಅನ್ನು ಸದಾನಂದ ಗೌಡರು ಮುಂದುವರೆಸಿಕೊಂಡು ಬಂದಿದ್ದಾರೆ.

1.05: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ 126 ಕೋಟಿ ರು ಅನುದಾನ
* ಭಾರತೀಯ ವಿಜ್ಞಾನ ಸಂಸ್ಥೆಯ ಚಳ್ಳಕೆರೆ ಕ್ಯಾಂಪಸ್‌ನಲ್ಲಿ ಸೌರಶಕ್ತಿ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ 10 ಕೋಟಿ ರು ಅನುದಾನ.
* ಪತ್ರಕರ್ತರಿಗೆ ಸಂಬಂಧಿಸಿದ ವಿವಿಧ ಕಲ್ಯಾಣ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂಪಾಯಿಗಳ ಅವಕಾಶವನ್ನು ಮಾಡಲಾಗುವುದು.
* ಮಂಡ್ಯದಲ್ಲಿ ಅಂಕೇಗೌಡ ವಾಚನಾಲಯಕ್ಕೆ 50ಲಕ್ಷ ರೂ. ಅನುದಾನ ನೀಡಲಾಗುವುದು.
* ಬೆಂಗಳೂರಿನ ಟೆಲಿವಿಜನ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ

12.50: ಕನ್ನಡ ಮತ್ತು ಸಂಸ್ಕೃತಿ ಕಲೆ ಹಾಗೂ ಸಾಹಿತ್ಯ, ನೆಲ-ಜಲದ ಸಂರಕ್ಷಣೆ
* ಪ್ರತಿವರ್ಷ ನವೆಂಬರ್ 1 ರಂದು ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ.
* ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 269 ಕೋಟಿ ರು.
* ಮೈಸೂರು ಅರಮನೆಯು 100 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅರಮನೆಯ ಉದ್ಯಾನವನಗಳನ್ನು ಉನ್ನತ ದರ್ಜೆಗೇರಿಸಲು ಹಾಗೂ ಪ್ರವಾಸಿಗರಿಗೆ ಹೆಚ್ಚಿನ
ಅನುಕೂಲ ಒದಗಿಸಲು 25 ಕೋಟಿ ರು.
* ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರು.ಗಳ ಅನುದಾನ
* ಬೆಂಗಳೂರಿನ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮತ್ತು ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು 2 ಕೋಟಿ ರು
* ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಕಂಬಳ ಉತ್ಸವವನ್ನು ಆಚರಿಸಲು 1 ಕೋಟಿ ರು ನೆರವು
* ರಾಜ್ಯ ಶಿಲ್ಪಕಲಾ ಅಕಾಡೆಮಿ ಮೂಲಕ ಶಿಲ್ಪಿಗಳ ತರಬೇತಿಗೆ 3 ಕೋಟಿ ರು.
* ಸರ್ಕಾರವು ಈಗಾಗಲೇ ಘೋಷಿಸಿರುವ 6 ಪಾರಂಪರಿಕ ಪ್ರದೇಶಗಳ ಜೊತೆಗೆ 14 ಹೊಸ ಪ್ರದೇಶಗಳನ್ನು ಪಾರಂಪರಿಕ ನಗರಗಳೆಂದು ಘೋಷಿಸುವ
ಕುರಿತು 1 ಕೋಟಿ ರೂ. ಗಳ ಅನುದಾನ.
* ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 5 ಕೋಟಿ ರು ಅನುದಾನ.
* ದಕ್ಷಿಣ ಕನ್ನಡದ ಉಳ್ಳಾಲದಲ್ಲಿ 2 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ.
* ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕಾಸರಗೋಡು ಇವರಿಗೆ 50 ಲಕ್ಷ ರು.

12.45: ಬ್ರೇಲ್ ಕೈಗಡಿಯಾರಗಳನ್ನು ತೆರಿಗೆಯಿಂದ ವಿನಾಯಿತಿ.
* ಫರ್ನೇಸ್ ಆಯಿಲ್ ಮೇಲಿನ ತೆರಿಗೆಯನ್ನು ಶೇ. 14 ರಿಂದ ಶೇ. 5 ಕ್ಕೆ ಇಳಿಕೆ
* ಕಪ್ಪು ಹಲಗೆಗಳ ಮೇಲಿನ ತೆರಿಗೆಯನ್ನು ಶೇ.14 ರಿಂದ ಶೇ.5 ಕ್ಕೆ ಇಳಿಕೆ.

12.30: ಬಿಬಿಎಂಪಿ ಗೆ 1,000 ಕೋಟಿ ಅನುದಾನ
* ಸಿಗ್ನಲ್ ಮುಕ್ತ ಕಾರಿಡಾರ್ ಗೆ 426 ಕೋಟಿ ರು
* ಘನತ್ಯಾಜ್ಯ ನಿರ್ವಹಣಾಗೆ 200 ಕೋಟಿ
* ಬೆಂಗಳೂರಿನಲ್ಲಿ ನೀರು ಸರಬರಾಜು ಮಂಡಳಿಗೆ 1 ಸಾವಿರ ಕೋಟಿ
* ಬೆಂಗಳೂರಿನ 8 ವಾಹನ ನಿಲುಗಡೆ ಸಮುಚ್ಚಯ
* ಬೆಂಗಳೂರು ಮೂಲ ಸೌಕರ್ಯಕ್ಕೆ 5500 ಕೋಟಿ ರು

12.15: ವಿವಿಧ ಇಲಾಖೆಗೆ ಅನುದಾನ, ಮೀಸಲು
* ಲೋಕೋಪಯೋಗಿ ಇಲಾಖೆ 5,110 ಕೋಟಿ
* ಜಲಸಂಪನ್ಮೂಲ ಇಲಾಖೆ: 8,101 ಕೋಟಿ
* ಆರೋಗ್ಯ : 4,620 ಕೋಟಿ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 6,896 ಕೋಟಿ
* ಸಮಾಜ ಕಲ್ಯಾಣ ಇಲಾಖೆ 3,993 ಕೋಟಿ
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 2883 ಕೋಟಿ
* ಕಂದಾಯ 3,061 ಕೋಟಿ
* ವಸತಿ 1,439 ಕೋಟಿ
* ಶಿಕ್ಷಣ ಇಲಾಖೆ 15,071 ಕೋಟಿ
* ವಾಣಿಜ್ಯ ಮತ್ತು ಕೈಗಾರಿಕೆ 1,508 ಕೋಟಿ
* ಮೆಟ್ರೋ ರೈಲು 500 ಕೋಟಿ
* ರಸ್ತೆ ಕಾಮಗಾರಿ 200 ಕೋಟಿ
* ಕೃಷಿ ಮತ್ತು ತೋಟಗಾರಿಕೆಗೆ 4,096 ಕೋಟಿ
* ಪಶುಸಂಗೋಪಣೆಗೆ 1,209 ಕೋಟಿ
* ಒಳಾಡಳಿತ ಮತ್ತು ಸಾರಿಗೆ 4,288 ಕೋಟಿ

12.10:
ಬೀಡಿಗಳ ಮೇಲೆ ಶೇ 5 ರಷ್ಟು ಮೌಲ್ಯ ವರ್ಧಿತ ತೆರಿಗೆ.
* ರೆಡಿಮೇಡ್ ಉಡುಪು ಶೇ 14 ರಿಂದ ಶೇ. 5 ಕ್ಕೆ ಇಳಿಕೆ.
* ಬಂಗಾರ, ಆಭರಣ, ಲೋಹಗಳ ಮೇಲಿನ ಶೇ 2 ರಿಂದ 1 ಕ್ಕೆ ಇಳಿಕೆ.
* ತಾತ್ಕಾಲಿಕ ಕಲ್ಯಾಣ ಮಂಟಪಗಳ ಮೇಲೆ ಶೇ 8 ರಷ್ಟು ತೆರಿಗೆ.
* ಸಿಗರೇಟ್, ಶೇ 15 ರಿಂದ 17ಕ್ಕೇ ಏರಿಕೆ
* ವಿಚಾರ ಸಂಕಿರಣ, ಸಮಾರಂಭಕ್ಕೆ ಶೇ.10 ತೆರಿಗೆ

* ಡೀಸೆಲ್ ತೆರಿಗೆ ಇಳಿಕೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ
* ಬೀರ್ ಮೇಲಿನ ತೆರಿಗೆ ಶೇ 7.5 ಸುಂಕ
* ಫ್ರೂಟ್ ವೈನ್ ಶೇ .50 ರಷ್ಟು ತೆರಿಗೆ ಕಡಿತ
* ಕಚ್ಚಾಹತ್ತಿ ಶೇ 5 ರಿಂದ ಶೇ 2 ಕ್ಕೆ ಇಳಿಕೆ
* ಸರ್ಜಿಕಲ್ ಪಾದರಕ್ಷೆ ತೆರಿಗೆ ಶೇ 14 ರಿಂದ ಶೇ 5ಕ್ಕೆ ಇಳಿಕೆ

* ಮುದ್ರಾಂಕ ಶುಲ್ಕ ಶೇ 6ರಿಂದ ಶೇ5ಕ್ಕೆ ಇಳಿಕೆ
* ಬಾಂಡ್ ಸಂಬಂಧಿತ ಶೇ .೦5 ಇಳಿಕೆ
* ದಿನಗೂಲಿ ನೌಕರರ ಸಂಬಳ ಹೆಚ್ಚಳ ತಿಂಗಳಿಗೆ ಸಾವಿರ ರೂ ಹೆಚಳ

* ಒಣ ಮೆಣಸಿನಕಾಯಿ ತೆರಿಗೆ ಶೆ 14 ರಿಂದ ಶೇ 5ಕ್ಕೆ ಇಳಿಕೆ.
* ಭತ್ತ ಅಕ್ಕಿ ಬೇಳೆಕಾಳು ತೆರಿಗೆ ಹೆಚ್ಚಳ ಇಲ್ಲ.


12:00: ದೇಗುಲ, ಮಠಗಳಿಗೆ ಅನುದಾನ
* ವಿಶ್ವಕರ್ಮ ಸಮುದಾಯ ಟ್ರಸ್ಟ್ ಗೆ 1 ಕೋಟಿ ರು
* ಬಲಿಜ ಸಮುದಾಯ ಅಭಿವೃದ್ಧಿಗೆ 1 ಕೋಟಿ ರು
* ಹಿಂದುಳಿಕ ವರ್ಗಗಳ ಒಕ್ಕೂಟದ ದಶಮಾನೋತ್ಸವಕ್ಕೆ 50 ಲಕ್ಷ ರು
* ಗುಲ್ಬರ್ಗಾ ವಿವಿ ಹಡಪದ ಅಧ್ಯಯನ ಪೀಠಕ್ಕೆ 1 ಕೋಟಿ
* ಹೊಸದುರ್ಗದ ಉಪ್ಪಾರ ಜನಾಂಗ ಅಭಿವೃದ್ಧಿಗೆ 1 ಕೋಟಿ ರು
* ಕ್ಷತ್ರಿಯ ಸಮಾಜದ ಅಂಬಾಭವಾನಿನಿಲಯಕ್ಕೆ 2 ಕೋಟಿ
* ವಿಶ್ವಗಾಣಿಗರ ಕೇಂದ್ರಕ್ಕೆ 1 ಕೋಟಿ
* ಬೆಂಗಳೂರಿನ ಕನಕ ಸ್ಮಾರಕ ಭವನಕ್ಕೆ 1 ಕೋಟಿ
* ಹೇಮಾ ವೇಮಾ ಸದ್ಭಾವನಾ ಪೀಠ ಹಿರೇ ಹೊಸಹಳ್ಳಿ ಭವನಕ್ಕೆ 1 ಕೋಟಿ
* ಕೊರಟಗೆರೆ ಅನ್ನಪೂರ್ಣೇಶ್ವರಿ ಟ್ರಸ್ಟ್ ದೇಗುಲ 1 ಕೋಟಿ
* ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ 2 ಕೋಟಿ ರು
* ಅಂಬಿಗರ ಚೌಡಯ್ಯ ಭವನಕ್ಕೆ 1ಕೋಟಿ
* ಜೇವರ್ಗಿ ಮರುಳ ಶಂಕರ ಪೀಠಕ್ಕೆ 1 ಕೋಟಿ
* ಮೈಸೂರು ಸಂದೇಶ ಭವನಕ್ಕೆ 2 ಕೋಟಿ
* ಬೆಂಗಳೂರಿನ ಭಗಿರಥ ಸಮಾಜಕ್ಕೆ 1 ಕೋಟಿ
* ನೆಲಮಂಗಲದ ಮಹಾಲಕ್ಷ್ಮಿ ಟ್ರಸ್ಟ್ ಗೆ 1 ಕೋಟಿ
* ತಿಗಳ ಸಮಾಜ ಅಭಿವೃದ್ಧಿಗೆ ಕ್ಕೆ 1 ಕೋಟಿ ರು
* ಸೊಮವಂಶ ಆರ್ಯ ಕ್ಷತ್ರೀಯ ವಿದ್ಯಾರ್ಥಿ ಭವನಕ್ಕೆ 50 ಲಕ್ಷ ರು
* ತೊಗಟವೀರ ಕ್ಷತ್ರಿಯ ಸಂಘಟನೆಗೆ 1 ಕೋಟಿ
* ಆರ್ಯ ಈಡಿಗ ಸಂಸ್ಥಾನ ಸೋಲೂರು 1 ಕೋಟಿ
* ರಾಜ್ಯ ಮಡಿವಾಳ ಸಮಾಜಕ್ಕೆ 1 ಕೋಟಿ
* ಕೊಪ್ಪಳ ನಗರದ ಗವಿಸಿದ್ದೇಶ್ವರ ಮಠಕ್ಕೆ 50 ಲಕ್ಷ ರೂ.ಗಳ ಅನುದಾನ
* ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠಕ್ಕೆ 2 ಕೋಟಿ
* ತಿಪಟೂರು ತಾಲ್ಲೂಕಿನ ಕಾಡಸಿದ್ಧೇಶ್ವರ ಶ್ರೀ ಮಠಕ್ಕೆ 1 ಕೋಟಿ ರು
* ಬೆಂಗಳೂರಿನ ಕೆಂಗೇರಿ ಬಳಿ ಇರುವ ರಾಮೋಹಳ್ಳಿ ಶ್ರೀ ಸಿದ್ದಾರೂಢ ಪೀಠಕ್ಕೆ 2 ಕೋಟಿ ರು
* ಹೊರರಾಜ್ಯದ ಛತ್ರಗಳ ನಿರ್ವಹಣೆಗಾಗಿ 10 ಕೋಟಿ ರು.
* ರುದ್ರಭೂಮಿ ನಿರ್ವಹಣೆಗಾಗಿ 10 ಕೋಟಿ ರು.

11:50: ಕಾಗಿನೆಲೆಗೆ 6 ಕೋಟಿ, ಕನಕ ಭವನಕ್ಕೆ 1 ಕೋಟಿ
* ಕನಕ ಅಧ್ಯಯನ ಪೀಠಕ್ಕೆ 1 ಕೋಟಿ
* ಕೃಷಿ ವಿದ್ಯಾರ್ಥಿಗಳಿಗೆ 1,500 ಸಹಾಯ ಧನ
* ಬಾಗಲಕೋಟೆಯಲ್ಲಿ ದಾಳಿಂಬೆ ಅಭಿವೃದ್ಧಿ ಕೇಂದ್ರ
* ಚಪಾತಿ, ಪರೋಟ ಮೇಲಿನ ತೆರಿಗೆ ಶೇ 14 ರಿಂದ 7ಕ್ಕೆ ಇಳಿಕೆ.
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆಗೆ 400 ಕೋಟಿ ರು

* ತುಮಕೂರಿನಲ್ಲಿ ಪುಷ್ಪ ಹರಾಜು ಕೇಂದ್ರ
* ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಿಕೆ ಹೆಚ್ಚಳ
* ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್, 6ನೇ ವೇತನ ಆಯೋಗದ ಶಿಫಾರಸ್ಸಿಗೆ ಅಸ್ತು
* ಸಾವಯವ ಕೃಷಿಗೆ 200 ಕೋಟಿ
* ಮಂಡ್ಯದ ಮೈಶುಗರ್ ಅಭಿವೃದ್ಧಿಗೆ 30 ಕೋಟಿ
* ಜೈವಿಕ ಇಂಧನ ಅಭಿವೃದ್ಧಿಗೆ 50 ಕೋಟಿ
* ಕೃಷಿ ಇಲಾಖೆಗೆ 2921 ಕೋಟಿ ಅನುದಾನ
* ಬೆಳಗಾವಿ, ಬಾಗಲಕೋಟೆ, ಕೋಲಾರದಲ್ಲಿ ಮಾವು ಅಭಿವೃದ್ಧಿ ಕೇಂದ್ರ
* ನೀರಾವರಿ ವಲಯಕ್ಕೆ 10,500 ಕೋಟಿ
* ಸಬ್ಸಿಡಿ ದರದಲ್ಲಿ ಬೀಜ ಉತ್ಪಾದನೆಗೆ 100 ಕೋಟಿ
* ಕೃಷಿ ವಿದ್ಯುತ್ ಗಾಗಿ 4,600 ಕೋಟಿ ರು. ಅನುದಾನ.

* ಹೊಸ ಪಶು ವೈದ್ಯಕೀಯ ಕಾಲೇಜಿಗೆ 60 ಕೋಟಿ ರು ಅನುದಾನ
* ರಾಣೆಬೆನ್ನೂರಿನಲ್ಲಿ ಮೆಕ್ಕೆ ಜೋಳ ಟೆಕ್ನಾಲಜಿ ಕೇಂದ್ರ
* ತಿಪಟೂರಿನಲ್ಲಿ ತೆಂಗಿನಕಾಯಿ ಟೆಕ್ನಾಲಜಿ ಪಾರ್ಕ್

* ಕೋನೇನಹಳ್ಳಿಯಲ್ಲಿ ಕೃಷಿ ಪಾಲಿಟೆಕ್ನಿಟ್ ಕಾಲೇಜು
* ರೇಷ್ಮೆ ಇಲಾಖೆಗೆ 293 ಕೋಟಿ
* 123 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ
* 10 HP ಪಂಪ್ ಸೆಟ್ ತನಕ ಉಚಿತ ವಿದ್ಯುತ್ ಪೂರೈಕೆಗೆ
* ಸ್ವಸಹಾಯ ಸಂಘಗಳಿಗೆ ಶೇ 4 ರಂತೆ ಬಡ್ಡಿದರದಂತೆ ಸಾಲ ಸೌಲಭ್ಯ
* ಗುಲ್ಬರ್ಗಾದಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್
* ರಾಣೆಬೆನ್ನೂರಿನಲ್ಲಿ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್
* ಕುಡಿಯುವ ನೀರಿಗೆ ಎತ್ತಿನಹೊಳೆ ಯೋಜನೆ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರಕ್ಕೆ ಅನುಕೂಲ.

English summary
Karnataka Budget 2012-13 : Budget presented by Chief Minister of Karnataka DV Sadananda Gowda. A please all, love all Budget Plan size is set at one lakh plus crore rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X