ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲ್ಪಿಜಿ ಗ್ರಾಹಕರಿಗೆ ಬಜೆಟ್ಟಲ್ಲಿ ಹೊಸ ಯೋಜನೆ
ಈ ಯೋಜನೆ ಕರ್ನಾಟಕದ ಮೈಸೂರಿನಲ್ಲಿ ಈಗಾಗಲೆ ಜಾರಿಯಲ್ಲಿದೆ ಎಂದು ಹೇಳಿದ ಪ್ರಣಬ್, ಮುಂದಿನ ಆರು ತಿಂಗಳಲ್ಲಿ ಕೆಲ ರಾಜ್ಯಗಳ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ಲೋಕಸಭೆಯಲ್ಲಿ ವಿವರಿಸಿದರು. ರಾಜಸ್ತಾನದ ಅಲ್ವರ್ನಲ್ಲಿ ಸೀಮೆಎಣ್ಣೆಯನ್ನು ಇದೇ ಯೋಜನೆಯಲ್ಲಿ ಮಾರಲಾಗುತ್ತಿದೆ.
ಈ ಯೋಜನೆಯ ಪ್ರಕಾರ, ಗ್ರಾಹಕರು ಎಲ್ಪಿಜಿ ಸಿಲಿಂಡರನ್ನು ತೈಲ ಕಂಪನಿಗಳು ನಿಗದಿಪಡಿಸಿದ ಮಾರುಕಟ್ಟೆ ದರ ಚುಕ್ತಾ ಮಾಡಿ ಕೊಳ್ಳಬೇಕು. ಗ್ರಾಹಕರ ಆದಾಯದ ಆಧಾರದ ಮೇಲೆ ಅವರಿಗೆ ಸಬ್ಸಿಡಿ ಲಭ್ಯವಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರ ಮರುಪಾವತಿಸಬೇಕಾದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಈ ಸ್ಕೀಮ್ ಆಧಾರ ಕಾರ್ಡ್ ಇರುವವರಿಗೆ ಮಾತ್ರ ಲಭ್ಯವಿರುತ್ತದೆ. ಆದರೆ, ಆಧಾರ್ ಚೀಟಿಯ ಆಧಾರದ ಮೇಲೆ ಗ್ರಾಹಕರನ್ನು ಗುರುತಿಸಿ ಅವರಿಗೆ ಹಣ ಮರುಪಾವತಿಸುವ ಈ ಯೋಜನೆಯ ಯಶಸ್ಸಿನ ಬಗ್ಗೆ ಅನೇಕ ಬ್ಯಾಂಕುಗಳು ಅನುಮಾನ ವ್ಯಕ್ತಪಡಿಸಿವೆ.
Comments
English summary
Union Finance minister Pranab Mukherjee has rolled out a new scheme for LPG users across the country in Union Budget 2012-13 presentation, where one has to pay full price of the cylinder and get back the subsidy money later, as per eligibility. This scheme is already active in Mysore, Karnataka.
Story first published: Friday, March 16, 2012, 17:31 [IST]