ಎಲ್‌ಪಿಜಿ ಗ್ರಾಹಕರಿಗೆ ಬಜೆಟ್ಟಲ್ಲಿ ಹೊಸ ಯೋಜನೆ

Pay for gas now and get back money later
ನವದೆಹಲಿ, ಮಾ. 16 : ದೇಶದಲ್ಲಿ ಎಲ್‌ಪಿಜಿ ತೀವ್ರ ಅಭಾವ ಇರುವುದರಿಂದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಕ್ಕೆ ಸಿಲಿಂಡರ್ ಕೊಂಡು, ವರಮಾನಕ್ಕೆ ತಕ್ಕಂತೆ ಸಬ್ಸಿಡಿ ಪಡೆಯುವ ಯೋಜನೆ ಕ್ರಮೇಣ ಜಾರಿಗೆ ಬರಲಿದೆ. ಈ ಹೊಸ ಯೋಜನೆಯನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ಮಂಡಿಸಿದ ಬಜೆಟ್ಟಿನಲ್ಲಿ ಪ್ರಸ್ತಾಪಿಸಿದರು.

ಈ ಯೋಜನೆ ಕರ್ನಾಟಕದ ಮೈಸೂರಿನಲ್ಲಿ ಈಗಾಗಲೆ ಜಾರಿಯಲ್ಲಿದೆ ಎಂದು ಹೇಳಿದ ಪ್ರಣಬ್, ಮುಂದಿನ ಆರು ತಿಂಗಳಲ್ಲಿ ಕೆಲ ರಾಜ್ಯಗಳ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ ಎಂದು ಲೋಕಸಭೆಯಲ್ಲಿ ವಿವರಿಸಿದರು. ರಾಜಸ್ತಾನದ ಅಲ್ವರ್‌ನಲ್ಲಿ ಸೀಮೆಎಣ್ಣೆಯನ್ನು ಇದೇ ಯೋಜನೆಯಲ್ಲಿ ಮಾರಲಾಗುತ್ತಿದೆ.

ಈ ಯೋಜನೆಯ ಪ್ರಕಾರ, ಗ್ರಾಹಕರು ಎಲ್‌ಪಿಜಿ ಸಿಲಿಂಡರನ್ನು ತೈಲ ಕಂಪನಿಗಳು ನಿಗದಿಪಡಿಸಿದ ಮಾರುಕಟ್ಟೆ ದರ ಚುಕ್ತಾ ಮಾಡಿ ಕೊಳ್ಳಬೇಕು. ಗ್ರಾಹಕರ ಆದಾಯದ ಆಧಾರದ ಮೇಲೆ ಅವರಿಗೆ ಸಬ್ಸಿಡಿ ಲಭ್ಯವಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ನಂತರ ಮರುಪಾವತಿಸಬೇಕಾದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಈ ಸ್ಕೀಮ್ ಆಧಾರ ಕಾರ್ಡ್ ಇರುವವರಿಗೆ ಮಾತ್ರ ಲಭ್ಯವಿರುತ್ತದೆ. ಆದರೆ, ಆಧಾರ್ ಚೀಟಿಯ ಆಧಾರದ ಮೇಲೆ ಗ್ರಾಹಕರನ್ನು ಗುರುತಿಸಿ ಅವರಿಗೆ ಹಣ ಮರುಪಾವತಿಸುವ ಈ ಯೋಜನೆಯ ಯಶಸ್ಸಿನ ಬಗ್ಗೆ ಅನೇಕ ಬ್ಯಾಂಕುಗಳು ಅನುಮಾನ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+