ರೆಡ್ಡಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಯುಗಾದಿ
ಬೆಂಗಳೂರು,
ಮಾ.16: ಹೌದು. ನಿರೀಕ್ಷೆಯಂತೆ ಅಕ್ರಮ ಗಣಿವೀರ ಜನಾರ್ದನ ರೆಡ್ಡಿಯನ್ನು ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ (ಮಾ. 16) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. id="toptextpromo">ಇದರಿಂದ
ವಿಚಾರಣೆಗೆಂದು ಕರೆತಂದಿದ್ದ ರೆಡ್ಡಿಯನ್ನು ಸಿಬಿಐ ತಂಡ ಪರಪ್ಪನ ಅಗ್ರಹಾರ ಜೈಲಿಗೆ ಹಸ್ತಾಂತರಿಸಿದೆ. ಮಾರ್ಚ್ 24ರವರೆಗೆ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಗುತ್ತದೆ. ಅಂದರೆ ಈ ಬಾರಿ ಯುಗಾದಿ ಮಾರ್ಚ್ 23ರಂದು ಇರುವುದರಿಂದ ರೆಡ್ಡಿ ಜೈಲಿನಲ್ಲೇ ಯುಗಾದಿ ಆಚರಿಸಲಿದ್ದಾರೆ. ರೆಡ್ಡಿಯನ್ನು ಜೈಲಿಗೆ ಒಪ್ಪಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ರೆಡ್ಡಿ ಮತ್ತು ಅಲಿಖಾನ್ ಗೆ ವಿಚಾರಣಾಧೀನ ಕೈದಿ ಸಂಖ್ಯೆಗಳು ಪ್ರಾಪ್ತಿಯಾಗಲಿವೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
2ರಂದು ಹೈದರಾಬಾದಿನ ಚಂಚಲಗೂಡ ಜೈಲಿನಿಂದ ಬೆಂಗಳೂರಿಗೆ ಕರತಂದಿದ್ದ ರೆಡ್ಡಿ 15 ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿದ್ದರು. ಇದೇ ವೇಳೆ, ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಗೆ ಸಹ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಬೆಂಗಳೂರು ಸಿಬಿಐ ಆಕ್ಷೇಪ ವ್ಯಕ್ತಪಡಿಸಿ, ವಾದ ಮಂಡಿಸಿತು.











Click it and Unblock the Notifications