ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈಲಲ್ಲಿ ಕಳ್ಳತನ ಮಾಡುತ್ತಿದ್ದ ಬೆಂಗಳೂರು ಬಾಲಕ ಸೆರೆ
ಬೆಂಗಳೂರಿನ ಕೆವಿಪಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಕೆಲ ತಿಂಗಳ ಹಿಂದೆ ಮನೆಬಿಟ್ಟು ಆಂಧ್ರಪ್ರದೇಶ ಸೇರಿದ್ದ ಮತ್ತು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ. ಪ್ಯಾಸೆಂಜರ್ ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದಾಗ ಖಮ್ಮೇ ರೈಲು ನಿಲ್ದಾಣದಲ್ಲಿ ಬಾಲಕನನ್ನು ಬಂಧಿಸಲಾಗಿದೆ.
ಆತನ ಪಾಲಕರಿಗೆ ಈ ವಿಷಯ ತಿಳಿಸಲಾಗಿದ್ದು, ಬಾಲಾಪರಾಧಿ ಮಂಡಳಿಯ ಮುಂದೆ ಆತನನ್ನು ಹಾಜರುಪಡಿಸಲಾಗುವುದು ಎಂದು ಸರಕಾರಿ ರೈಲ್ವೆ ಪೊಲೀಸ್ ಸುಪರಿಂಟೆಂಡೆಂಟ್ ಆಗಿರುವ ಎಮ್ ಕಾಂತ ರಾವ್ ಅವರು ತಿಳಿಸಿದ್ದಾರೆ.
ಪ್ರಸ್ತುತ ರೈಲ್ವೆ ಬಜೆಟ್ ಮಂಡಿಸುತ್ತಿರುವ ಸಚಿವ ದಿನೇಶ್ ತ್ರಿವೇದಿ ಅವರು, ರೈಲುಗಳಲ್ಲಿ ಕಳ್ಳತನಗಳಾಗದಂತೆ, ಸಾಮಾನು ಸರಂಜಾಮುಗಳು ಸುರಕ್ಷಿತವಾಗುವಂತೆ ಏನು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ? ರೈಲ್ವೆ ಇಲಾಖೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಮಾತಾಡುತ್ತಿರುವ ತ್ರಿವೇದಿ ಅವರು ಪ್ರಯಾಣಿಕರ ಸುರಕ್ಷತೆಯತ್ತ ಹೆಚ್ಚಿನ ಗಮನ ನೀಡಲಿ.
Comments
English summary
A Bangalore boy, studying in KVP school, has been arrested by Railway Police at Khammam railway statation in Andhra Pradesh. He had left school months back and started stealing things in railway stations.
Story first published: Wednesday, March 14, 2012, 12:39 [IST]