ಕಾಂಗ್ರೆಸ್ ವಿರುದ್ಧ ಸ್ವಾಮಿ ಸಮರಕ್ಕೆ ಎನ್ ಡಿಎ ಬಲ

ಎಲ್ ಕೆ ಅಡ್ವಾಣಿ ಅವರ ನೇತೃತ್ವದ ಎನ್ ಡಿಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಅಸೆಂಬ್ಲಿ ಚುನಾವಣೆಗಳಲ್ಲಿ ಕಳಪೆ ಸಾಧನೆ ಮಾಡಿ ನೆಲಕಚ್ಚಿರುವ ಕಾಂಗ್ರೆಸ್ ಗೆ ಈ ರಾಜಕೀಯ ನಡೆ ಇನ್ನಷ್ಟು ತೊಂದರೆಗಳನ್ನು ತಂದೊಡ್ಡಲಿದೆ.
ಯುಪಿಎ ಸರ್ಕಾರದ ಆರ್ಥಿಕ ನೀತಿ ಹಾಗೂ ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಜನತಾ ಪಾರ್ಟಿ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ಎನ್ ಡಿಎ ಸೇರಿದ ಮೇಲೆ ಕಾಂಗ್ರೆಸ್ ಇನ್ನಷ್ಟೂ ಹೆಚ್ಚು ಶಕ್ತಿಯುತ ಹೋರಾಟ ಮಾಡಲಿದ್ದಾರೆ.
ಜನತಾ ಪಾರ್ಟಿ ಅಲ್ಲದೆ ಎನ್ ಡಿಎ ಮೈತ್ರಿಕೂಟದಲ್ಲಿ ಶಿವಸೇನೆ, ಶಿರೋಮಣಿ ಅಕಾಲಿದಳ, ಬಿಜೆಪಿ, ಜೆಡಿ(ಯು) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ಸೇರಿದೆ.












Click it and Unblock the Notifications