ಅಹಿಂದ ನಾಮಬಲದಲ್ಲಿ ಶ್ರೀರಾಮುಲು ಏಳಿಗೆ

ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿಗಳ ಸಬಲೀಕರಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅಹಿಂದ ಚಳವಳಿ ಸ್ಥಿತಿಗತಿ ಹದಗೆಟ್ಟಿದೆ. ಜೊತೆಗೆ ದಲಿತ ಚಳವಳಿಯೂ ಸಹ ಹಾದಿ ತಪ್ಪಿದೆ.
ಸ್ವಾತಂತ್ರಾನಂತರವೂ ಅಲೆಮಾರಿ ಸಮುದಾಯಗಳಿಗೆ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಕುಡಿಯುವ ನೀರು, ಸೂರು, ಶಿಕ್ಷಣ ಯಾವುದು ದೊರೆತಿಲ್ಲ ಎಂದು ವಿಷಾದಿಸಿದರು.
ಗೃಹ ಕೈಗಾರಿಕೆಗಳು ನಾಶಗೊಂಡಿವೆ. ಪೊರಕೆಗಳ ಮಾರುಕಟ್ಟೆ ಕೇವಲ ಎಂಟು ಕುಟುಂಬಗಳ ಕೈಯಲ್ಲಿದೆ. ಇದರಿಂದ ಅಲೆಮಾರಿಗಳ ಬದುಕುವ ಎಲ್ಲಾ ದಾರಿಗಳು ಮುಚ್ಚಿ ಹೋಗಿವೆ. ಕುಲ ಕಸುಬುಗಳಿಂದ ಆದಾಯ ಸಿಗುತ್ತಿಲ್ಲ. ಅವಮಾನ ಆಗುತ್ತಿದೆ ಎಂಬ ಆಲೋಚನೆಗೆ ಪರ್ಯಾಯವಾಗಿ ಯೋಚಿಸಬೇಕು. ಅದನ್ನು ಲಾಭದ ಮಾರುಕಟ್ಟೆಯನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರಾಮಯ್ಯ ಸಲಹೆ ನೀಡಿದ್ದಾರೆ.












Click it and Unblock the Notifications