ಪರಿಶಿಷ್ಟ ವರ್ಗದ ಮಠಾಧೀಶರಿಂದ ಸದಾನಂದ ಗೌಡ ಭೇಟಿ
ಬೆಂಗಳೂರು,
ಮಾ. 10 : ಮಾರ್ಚ್ 21ರಂದು 2012-13ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ಮತ್ತು ಪರಿಶಿಷ್ಟ ವರ್ಗದ ಮಠಾಧಿಪತಿಗಳು ಕಾಗಿನೆಲೆ ಪೀಠದ ನಿರಂಜನಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಅಧಿಕೃತ ಕಚೇರಿ 'ಕೃಷ್ಣಾ'ದಲ್ಲಿ ಶನಿವಾರ ಭೇಟಿ ಮಾಡಿದರು. id="toptextpromo">ಬೋವಿ,
ಕುರುಬ, ಈಡಿಗ ಸಮುದಾಯಕ್ಕೆ ಸೇರಿದ ಸುಮಾರು 20ಕ್ಕೂ ಹೆಚ್ಚು ಕಾವಿಧಾರಿ ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಜೆಟ್ನಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿದ್ದರು. id='are-slot-1' class='oiad oi-axt oiadv'> id='top-searched-articles'>ಹಿಂದುಳಿದ
ವರ್ಗಕ್ಕೆ ಖಂಡಿತ ಹೆಚ್ಚಿನ ಅನುದಾನವನ್ನು ಬಜೆಟ್ಟಲ್ಲಿ ದೊರಕಿಸಿಕೊಡುವುದಾಗಿ ಗೌಡರು ಭರವಸೆ ನೀಡಿರುವುದಾಗಿ, ಭೇಟಿಯ ನಂತರ ನಿರಂಜನ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದರು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಮತಎಣಿಕೆಯ ದಿನವೇ ಸದಾನಂದ ಗೌಡರು ತಮ್ಮ ಪ್ರಥಮ ಬಜೆಟ್ ಮಂಡಿಸಲಿದ್ದಾರೆ.











Click it and Unblock the Notifications