ಅನ್ನದ ಮೇಲೆ ಪ್ರಮಾಣ ಮಾಡಿದ್ದ ಯಡಿಯೂರಪ್ಪ

ಬೆನ್ನಿಗೆ ಚೂರಿ ಹಾಕಿದ ಯಡ್ಡಿ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ನಾವೇ ಕಾರಣ. ಯಡಿಯೂರಪ್ಪ ನಮ್ಮನ್ನು ಬಳಸಿಕೊಂಡು ನಮ್ಮನ್ನೇ ತುಳಿದರು. 'ನಿಮ್ಮ ಋಣ ಎಂದಿಗೂ ಮರೆಯೋಲ್ಲ' ಎಂದು ಅನ್ನದ ಮೇಲೆ ಪ್ರಮಾಣ ಮಾಡಿ ಹೇಳಿದ್ದರು. ಬಳಿಕ ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಅವರು ಸಿಎಂ ಆಗಿದ್ದಾಗ ಅಧಿಕಾರಿಗಳ ವರ್ಗಾವಣೆಯಲ್ಲಿ ನಾನೆಂದೂ ವೈಯಕ್ತಿಕ ನೆರವು ಕೇಳಿರಲಿಲ್ಲ' ಎಂದು ಜನಾರ್ದನ ರೆಡ್ಡಿಯ ಖಾಸಾ ಬಂಟ ರಾಮುಲು ಎದೆ ತಟ್ಟಿಕೊಂಡು ಹೇಳಿದರು.
ಕುತೂಹಲದ ಸಂಗತಿಯೆಂದರೆ 'ಯಡ್ಡಿ ನಮ್ಮ ಪಕ್ಷಕ್ಕೆ ಬರೋದು ಬೇಡ' ಎಂದು ಯಡಿಯೂರಪ್ಪ ವಿರುದ್ಧ ರಾಮುಲು ಇತ್ತೀಚೆಗೆ ಸಾಕಷ್ಟು ಗಂಭೀರ ಆಪಾದನೆಗಳನ್ನು ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇದೀಗ ಯಡಿಯೂರಪ್ಪ ಜತೆಜತೆಗೆ ಬಿಜೆಪಿ ವಿರುದ್ಧವೂ ರಾಮುಲು ಕಿಡಿಕಾರಿದ್ದಾರೆ. ಏನೆಲ್ಲ ಪ್ರತಿಕ್ರಿಯೆಗಳು ಬರುತ್ತವೋ ಕಾದು ನೋಡಬೇಕು.












Click it and Unblock the Notifications