ಕೊಲೆ ಕೇಸ್ :ಕಂಚಿ ಶ್ರೀಗಳ ಮೇಲೆ ತನಿಖೆಗೆ ಆದೇಶ

ನ್ಯಾ. ಪಾಲ್ ಎನ್ ವಸಂತ್ ಕುಮಾರ್ ಹಾಗೂ ಜಿಎಂ ಅಕ್ಬರ್ ಅಲಿ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಶಂಕರ್ ರಾಮನ್ ಹತ್ಯೆ ಪ್ರಕರಣದ ತೀರ್ಪಿನ ಹಿಂದೆ ಕಾಣದ ಕೈಗಳ ಕೈವಾಡವಿರುವ ಬಗ್ಗೆ ನ್ಯಾಯಪೀಠ ಶಂಕೆ ಹೊರಡಿಸಿದೆ.
ಅಡ್ವೋಕೇಟ್ ಪಿ ಸುಂದರರಾಜನ್ ಹಾಗೂ ಮಣಿಕಂದನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ತನಿಖೆ ನಡೆಸುವಂತೆ ಡಿಜಿಪಿ ಡಾ ಸುಧಾಕರ್ ಅವರಿಗೆ ಸೂಚಿಸಿತು.
ಸೈಬರ್ ಕ್ರೈಂ ವಿಭಾಗ ಅಥವಾ ಇತರೆ ವಿಭಾಗದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಮೂರು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
ಕಂಚೀಪುರಂನ ವರದರಾಜಪೆರುಮಾಳ್ ದೇಗುಲದ ಮ್ಯಾನೇಜರ್ ಆಗಿದ್ದ ಶಂಕರ್ ರಾಮನ್ ಅವರನ್ನು ಸೆ.3,2004ರಲ್ಲಿ ಕಚೇರಿ ಆವರಣದಲ್ಲೇ ಕೊಲೆ ಮಾಡಲಾಗಿತ್ತು.
ಜಯೇಂದ್ರ ಹಾಗೂ ವಿಜಯೇಂದ್ರ ಸರಸ್ವತಿ ಅವರ ಮೇಲೆ ಐಪಿಸಿ ಸೆಕ್ಷನ್ 302 ಹಾಗೂ 120-ಬಿ ಅಡಿಯಲ್ಲಿ ಆರೋಪ ಹೊರೆಸಲಾಗಿತ್ತು. ಚೆಂಗಲ್ ಪಟ್ಟು ಕೋರ್ಟ್ ನಿಂದ ಪ್ರಕರಣ ಈಗ ಪುದುಚೇರಿಗೆ ವರ್ಗವಾಗಿದೆ. ಹೈಕೋರ್ಟ್ ಆದೇಶದಿಂದ ಪ್ರಕರಣಕ್ಕೆ ಮತ್ತೆ ಜೀವ ಪಡೆದಿದೆ.












Click it and Unblock the Notifications