15 ದಿನದಲ್ಲಿ ಹೊಸ ಲೋಕಾಯುಕ್ತ ನೇಮಕ: ಡಿವಿಎಸ್

ಇನ್ನು 15 ದಿನಗಳಲ್ಲಿ ಹೊಸ ಲೋಕಾಯುಕ್ತರ ನೇಮಕಾತಿ ಆಗಲಿದೆ ಎಂದು ಸದಾನಂದಗೌಡ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತ್ತಿದ್ದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಹಾಗೂ ವಿಧಾನಸಭಾ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮೋಟಮ್ಮ ಅವರ ಸಲಹೆ ಕೇಳಲಾಗಿದೆ.
ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಹುದ್ದೆ ತ್ಯಜಿಸಿದ ನಂತರ ಕಳೆದ ಐದು ತಿಂಗಳಿನಿಂದ ಹೊಸ ಲೋಕಾಯುಕ್ತರನ್ನು ನೇಮಿಸಲು ಸಾಧ್ಯವಾಗಿಲ್ಲ. ನ್ಯಾ. ಬನ್ನೂರ್ ಮಠ ಅವರ ಹೆಸರನ್ನು ಸರ್ಕಾರ ಸೂಚಿಸಿದ್ದು, ಇದಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸಮ್ಮತಿಸಿಲ್ಲ.
ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಸಲ್ಲಿಸಲು ಕೂಡಾ ಕರ್ನಾಟಕ ಬಿಜೆಪಿ ಚಿಂತನೆ ನಡೆಸಿದೆ.












Click it and Unblock the Notifications