ಮೀರ್ ಸಾದಿಕ್ ಗಳಿಂದ ಬಿಎಸ್ ವೈ ಬೆನ್ನಿಗೆ ಚೂರಿ

Shobha Karandlaje
ತುಮಕೂರು, ಫೆ.27: 'ಯಡಿಯೂರಪ್ಪ ಅವರಿಂದ ರಾಜಕೀಯವಾಗಿ ಮೇಲೆ ಬಂದವರೇ ಅವರಿಗೆ ಮುಳುವಾದರು. ಬಿಜೆಪಿಯಲ್ಲಿರುವ ಮೀರ್ ಸಾದಿಕ್ , ಮಲ್ಲಪ್ಪ ಶೆಟ್ಟರ ರೀತಿ ಕೆಲವು ಸಮಯಸಾಧಕರ ಕುತಂತ್ರಕ್ಕೆ ಯಡಿಯೂರಪ್ಪ ಬಲಿಯಾಗಿದ್ದಾರೆ. ಆದರೆ ಹೆಚ್ಚು ಕಾಲ ನಡೆಯುವುದಿಲ್ಲ'ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಭಾವುಕರಾಗಿ ಶೋಭಾ ಅವರು ಭಾಷಣ ಮಾಡಿದರು. ಯಡಿಯೂರಪ್ಪ ಅವರು ಕಷ್ಟಪಟ್ಟು ಪಕ್ಷವನ್ನು ಕಟ್ಟಿದ್ದಾರೆ.

ಅವರ ಹೆಸರು ಹೇಳಿಕೊಂಡು ಬೆಳೆದ ಹಲವರು ಈಗ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ಅವರು ಸದಾ ಜನಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ. ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಶೋಭಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+