3 ಗಂಟೆಯಲ್ಲೇ ಹಾಸನ ಬೆಂಗಳೂರು ಪ್ರಯಾಣ ಸಾಧ್ಯ?

ರಾಷ್ಟ್ರೀಯ ಹೆದ್ದಾರಿ 48 ಚತುರ್ ಪಥ ರಸ್ತೆಯಾಗಿ ರೂಪುಗೊಂಡಿದೆ. NH 48ರ ಸುಮಾರು 185 ಕಿ.ಮೀ ರಸ್ತೆ ಈ ಯೋಜನೆಗೆ ಒಳಪಟ್ಟಿದೆ.
ನೆಲಮಂಗಲದಿಂದ ದೇವಿಹಳ್ಳಿ ತನಕ (81.8 ಕಿ.ಮೀ) ಹಾಗೂ ದೇವಿಹಳ್ಳಿ(ಬೆಳ್ಳೂರು ಕ್ರಾಸ್)ಯಿಂದ ಹಾಸನ ತನಕ(77 ಕಿ.ಮೀ) ರಸ್ತೆ ಸುಧಾರಣೆ ಕಾಮಗಾರಿ ಪೂರ್ಣಗೊಂಡಿದೆ.
ಬಯಲು ಸೀಮೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚತುರ್ಪಥ ಯೋಜನೆ ಅಲ್ಲದೆ ಅಪಘಾತ ವಲಯಗಳಲ್ಲಿ ರಸ್ತೆ ನವೀಕರಣಗೊಳಿಸಲಾಗಿದೆ.
ಪ್ರಮುಖ ಅಪಘಾತ ವಲಯಗಳಾದ ಸೋಲೂರು, ಕುಣಿಗಲ್, ಯಡಿಯೂರು ಹಾಗೂ ಚನ್ನರಾಯಪಟ್ಟಣಗಳಲ್ಲಿ ತಿರುವು ರಸ್ತೆಗಳನ್ನು ನೇರಗೊಳಿಸಲಾಗಿದೆ ಎಂದು NHAI ಯೋಜನಾ ನಿರ್ದೇಶಕ ಆರ್ ಕೆ ಗುಪ್ತ ಹೇಳಿದ್ದಾರೆ.
ಮೊದಲ ಹಂತಕ್ಕೆ 441 ಕೋಟಿ ರು ತಗುಲಿದ್ದು ಲ್ಯಾಂಕೋ ಸಂಸ್ಥೆ ಕಾಮಗಾರಿ ಪೂರೈಸಿದೆ. 453 ಕೋಟಿ ರು ವೆಚ್ಚದ ಎರಡನೇ ಹಂತವನ್ನು ಎಲ್ ಅಂಡ್ ಟಿ ಕಂಪನಿ ಪೂರೈಸುವ ಹಂತದಲ್ಲಿದೆ. ಮುಂದಿನ ಜೂನ್ ವೇಳೆಗೆ ಹಾಸನ ಬೆಂಗಳೂರು ಮಾರ್ಗ ಸರಾಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗುಪ್ತ ಅವರು ಹೇಳಿದರು.












Click it and Unblock the Notifications