ಕೇರಳದಲ್ಲಿ 4000 ಕೋಟಿ ರು ಅಕ್ರಮ ಚಿನ್ನದ ವ್ಯವಹಾರ
ತಿರುವನಂತಪುರ,
ಫೆ.17: ಕೇರಳ ದೇವರನಾಡು ಜತೆಗೆ ಚಿನ್ನದ ನಾಡೂ ಹೌದು. ಇಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಅನಂತ ಚಿನ್ನದ ಸಂಪತ್ತನ್ನು ಪಕ್ಕಕ್ಕಿಟ್ಟು ತೂಗಿದರೂ ಕೇರಳದಲ್ಲಿನ ಚಿನ್ನ ಮತ್ತು ಚಿನ್ನದ ವಹಿವಾಟು ಇತರೆ ರಾಜ್ಯಗಳಿಗಿಂತ ಬಹಳಷ್ಟು ಮುಂದಿದೆ ಎನ್ನಬಹುದು. ಇದೇ ತಕ್ಕಡಿಯಲ್ಲಿ ತೂಗುವುದಾದರೆ ಕಾನೂನುಬಾಹಿರ ಚಿನ್ನದ ವಹಿವಾಟಿಗೂ ಇಲ್ಲಿ ಅಗ್ರ ತಾಂಬೂಲವಿದೆ. id="toptextpromo">ಕೇರಳ
ರಾಜ್ಯದಲ್ಲಿ ನಡೆಯುವ ಭೂಗತ, ಕಾನೂನುಬಾಹಿರ ವಾರ್ಷಿಕ ವಹಿವಾಟು ಅಂದಾಜು 4,000 ಕೋಟಿ ರುಪಾಯಿ. ಅಂದರೆ ಮುಖ್ಯವಾಹಿನಿಯಲ್ಲಿ ಕಾನೂನಿಗೆ ಅನುಗುಣವಾಗಿ ನಡೆಯುವ ವಹಿವಾಟಿನಲ್ಲಿ ಶೇ. 20ರಷ್ಟಿದೆ. ಖಾಸಗಿ ಹಣಕಾಸು ಕಂಪನಿಗಳಲ್ಲಿ ಅಡ ಇಟ್ಟಿರುವ ಟನ್ ಗಟ್ಟಲೆ ಚಿನ್ನ ಈ ಭೂಗತ ಚಿನ್ನದ ವಹಿವಾಟಿಗೆ ನೆರವಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಕಾನೂನುಬಾಹಿರವಾದರೂ
ಇಲ್ಲಿ ಭಾವನಾತ್ಮಕ ವಿಷಯಗಳು ಅಕ್ರಮ ವಹಿವಾಟುದಾರರ ಕೈಹಿಡಿಯುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಭೂಗತ ವಹಿವಾಟುದಾರರು ಆಪತ್ಬಾಂಧವರಂತೆ ಗೋಚರಿಸುತ್ತಾರೆ. ಹೀಗೆ, ಜನರನ್ನು ದಿನಾ ಚಿನ್ನದ ಮೊಟ್ಟೆಯಿಡುವ ಕೋಳಿಗಳನ್ನಾಗಿ ಇವರು ಪರಿವರ್ತಿಸಿಕೊಳ್ಳುತ್ತಾರೆ. ಹಣ ಕೊಟ್ಟು ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಜನ ಇವರತ್ತ ಮುಖ ಮಾಡುತ್ತಾರೆ. ಅಲ್ಲಿಗೆ ತಂತಾನೇ ಭೂಗತ ವಹಿವಾಟುದಾರರ ಮುಂದೆ ಚಿನ್ನದ ಗುಡ್ಡೆಯೇಳುತ್ತದೆ. ಕದ್ದ ಚಿನ್ನದ ಮಾಲೂ ಹೀಗೆ ಮುಖ್ಯವಾಹಿನಿಗೆ ಬಂದು ಬೀಳುತ್ತದೆ.











Click it and Unblock the Notifications