ವಿಡಿಯೋ ನೋಡಿದ್ದು ನಿಜ, ಅದರಲ್ಲಿ 'ಅಂಥದ್ದು' ಏನಿರಲಿಲ್ಲ!

ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗ ಅಶ್ಲೀಲ ವಿಡಿಯೋವನ್ನು ನೋಡುತ್ತಿದ್ದಾಗ ಫೆ.7ರಂದು ಲಕ್ಷ್ಮಣ ಸವದಿ ಕ್ಯಾಮೆರಾ ಕಣ್ಣಿಗೆ ಸಿಕ್ಕುಬಿದ್ದಿದ್ದರು ಮತ್ತು ಅವರ ಪಕ್ಕದಲ್ಲಿ ಕುಳಿತಿದ್ದ ಸಿಸಿ ಪಾಟೀಲ್ ಕೂಡ ನೀಲಿ ಚಿತ್ರ ನೋಡಿದ ಆರೋಪಕ್ಕೆ ಗುರಿಯಾಗಿದ್ದರು. ಇಂಥ ನೀಲಿ ಚಿತ್ರವನ್ನು ಸವದಿಗೆ ಕಳಿಸಿದ ಆರೋಪವನ್ನು ಕೃಷ್ಣ ಪಾಲೇಮಾರ್ ಮೇಲೆ ಹೊರಿಸಲಾಗಿತ್ತು. ನಂತರ ಮೂವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅವರ ಉತ್ತರಗಳು ಕೆಳಗಿನಂತಿವೆ
ಲಕ್ಷ್ಮಣ ಸವದಿ : ಸದನದಲ್ಲಿ ವಿಡಿಯೋ ನೋಡಿದ್ದು ನಿಜ. ವಿಧಾನಸಭೆಗೆ ಮೊಬೈಲ್ ತಂದಿದ್ದು ಮೊದಲ ತಪ್ಪು, ವಿಡಿಯೋ ನೋಡಿದ್ದು ಎರಡನೇ ತಪ್ಪು. ಆದರೆ ಆ ವಿಡಿಯೋದಲ್ಲಿ 'ಅಂಥದ್ದು' ಏನೂ ಇರಲಿಲ್ಲ. ವಿದೇಶದಲ್ಲಿ ಮಹಿಳೆಯೊಬ್ಬಳ ಮೇಲೆ ಎಸಗಿದ ದೌರ್ಜನ್ಯ ಅದಾಗಿತ್ತು. ಅದನ್ನು ಕಳಿಸಿದ್ದು ಪಾಲೇಮಾರ್ ಅವರು. ಆ ವಿಡಿಯೋವನ್ನು ಪಾಟೀಲರಿಗೂ ತೋರಿಸಿದೆ. ಅದರಲ್ಲಿ ಅಶ್ಲೀಲತೆ ಇರಲಿಲ್ಲ.
ಸಿಸಿ ಪಾಟೀಲ : ಸವದಿಯವರು ನೋಡುತ್ತಿದ್ದ ವಿಡಿಯೋದಲ್ಲಿ ಅಶ್ಲೀಲತೆಯಿರಲಿಲ್ಲ. ಅದು ವಿದೇಶದಲ್ಲಿ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ವಿಡಿಯೋ ಆಗಿತ್ತು. ಸ್ವಲ್ಪ ಹೊತ್ತು ನೋಡಿ, ಅದನ್ನು ಬಂದ್ ಮಾಡಿರೆಂದು ನಾನು ಆಚೆ ಸರಿದೆ. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಇದೆಲ್ಲ ಮಾಧ್ಯಮಗಳ ಕುಕೃತ್ಯ. ನನ್ನನ್ನು ಬಲಿಪಶು ಮಾಡಲಾಗಿದೆ.
ಕೃಷ್ಣ ಜೆ. ಪಾಲೇಮಾರ್ : ಮೊಬೈಲ್ ಬಳಕೆ ಬಗ್ಗೆ ನನಗೆ ತಲೆಬುಡ ಗೊತ್ತಿಲ್ಲ. ಇನ್ನು ಅಂಥ ವಿಡಿಯೋ ಇನ್ನೊಬ್ಬರಿಗೆ ಕಳಿಸುವುದು ದೂರದ ಮಾತು. ನಾನು ಲಕ್ಷ್ಮಣ ಸವದಿ ಅವರಿಗೆ ಕಳಿಸೇ ಇಲ್ಲ. ಅದು ಅವರ ಮೊಬೈಲ್ ಹೇಗೆ ಸೇರಿತು ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ. ನನ್ನ ಮೇಲೆ ಅನಗತ್ಯವಾಗಿ ಆರೋಪ ಹೊರಿಸಲಾಗಿದೆ. ನನ್ನನ್ನು ಕೂಡ ಬಲಿಪಶು ಮಾಡಲಾಗಿದೆ.
ಸಮಿತಿ ರಚನೆ : ಇಷ್ಟೆಲ್ಲ ಉತ್ತರ ಕೊಟ್ಟು ಮಂತ್ರಿತ್ರಯರು ನಿರಾಳರಾಗಿದ್ದಾರೆ. ಕಳಂಕಿತ ಶಾಸಕರ ಉತ್ತರ ಸಿಗುತ್ತಿದ್ದಂತೆ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ನೀಲಿ ಚಿತ್ರ ವೀಕ್ಷಣೆಯ ತನಿಖೆಗೆಂದು ಸಮಿತಿ ರಚಿಸಿದ್ದಾರೆ. ಶ್ರೀಶೈಲಪ್ಪ ಬಿದರೂರು ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯಲ್ಲಿರುವ ಇತರ ಸದಸ್ಯರು : ಅಮರೇಗೌಡ ಪಾಟೀಲ ಬಯ್ಯಾಪುರ, ಎಸ್ ಆರ್ ವಿಶ್ವನಾಥ್, ಬಿ ಸುರೇಶ್ ಗೌಡ, ನೆಹರು ಓಲೆಕಾರ್, ಎಚ್ ಸಿ ಮಹದೇವಪ್ಪ ಮತ್ತು ದಿನಕರ್ ಕೇಶವಶೆಟ್ಟಿ. ಇವರು ತನಿಖೆ ನಡೆಸಿ ಮಾ.13ರೊಳಗೆ ವರದಿ ಸಲ್ಲಿಸಬೇಕಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications