ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಸರಕೊಂಡದಲ್ಲಿ ದುರಂತ, 2 ವಿದ್ಯಾರ್ಥಿಗಳ ಸಾವು

By Mahesh
|
Google Oneindia Kannada News

Apsarakonda Beach Honnavar
ಭಟ್ಕಳ, ಫೆ.14: ಅಪ್ಸರಕೊಂಡ ಜಲಪಾತ, ಸಮುದ್ರದಲ್ಲಿ ಈಜಾಡಿ ಮೋಜು ಮಾಡಲು ಹೋಗಿದ್ದ ಹೊನ್ನಾವರ ಎಸ್‌ಡಿಎಂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾದ ದುರಂತ ಘಟನೆ ಸಂಭವಿಸಿದೆ.

ಸಮುದ್ರಪಾಲಾದವರನ್ನು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥ ಕಾಲೇಜಿನ ವಿದ್ಯಾರ್ಥಿಗಳಾದ ರಘುವೀರ್ ನಾಯ್ಕ(17) ಹಾಗೂ ಸಂದೀಪ್ ಆಚಾರಿ(17) ಎಂದು ಗುರುತಿಸಲಾಗಿದೆ. ಈ ಪೈಕಿ ರಘುವೀರ್ ನಾಯ್ಕರ ಮೃತದೇಹ ಪತ್ತೆಯಾಗಿದೆ. ಸಂದೀಪ್ ಅವರ ಶವಕ್ಕಾಗಿ ಹುಡುಕಾಟ ನಡೆದಿದೆ.

ಇನ್ನೊಬ್ಬ ಸ್ನೇಹಿತ ಸುಬ್ರಹ್ಮಣ್ಯ ಶಂಕರ್ ನಾಯ್ಕ ಎಂಬಾತ ಕೂಡಾ ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಮೂವರು ವಿದ್ಯಾರ್ಥಿಗಳು ಸೋಮವಾರ ಸಂಜೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣ ಅಪ್ಸರಕೊಂಡದ ಸಮುದ್ರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಈಜಲು ತೆರಳಿದ್ದರು.

ಈಜುತ್ತಿದ್ದ ಮೂವರು ಕೂಡಾ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಈ ಪೈಕಿ ಓರ್ವನನ್ನು ಮಾತ್ರ ಸ್ಥಳೀಯರು ಪಾರು ಮಾಡಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Two SDM College, Honnavar Students died after drowned in to Apsarakonda Beach in Honnavar at Manki Police station limits, Bhatkal. Another student is rescued and police are searching for dead body of deceased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X