ಅಪ್ಸರಕೊಂಡದಲ್ಲಿ ದುರಂತ, 2 ವಿದ್ಯಾರ್ಥಿಗಳ ಸಾವು

Apsarakonda Beach Honnavar
ಭಟ್ಕಳ, ಫೆ.14: ಅಪ್ಸರಕೊಂಡ ಜಲಪಾತ, ಸಮುದ್ರದಲ್ಲಿ ಈಜಾಡಿ ಮೋಜು ಮಾಡಲು ಹೋಗಿದ್ದ ಹೊನ್ನಾವರ ಎಸ್‌ಡಿಎಂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಮುದ್ರ ಪಾಲಾದ ದುರಂತ ಘಟನೆ ಸಂಭವಿಸಿದೆ.

ಸಮುದ್ರಪಾಲಾದವರನ್ನು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥ ಕಾಲೇಜಿನ ವಿದ್ಯಾರ್ಥಿಗಳಾದ ರಘುವೀರ್ ನಾಯ್ಕ(17) ಹಾಗೂ ಸಂದೀಪ್ ಆಚಾರಿ(17) ಎಂದು ಗುರುತಿಸಲಾಗಿದೆ. ಈ ಪೈಕಿ ರಘುವೀರ್ ನಾಯ್ಕರ ಮೃತದೇಹ ಪತ್ತೆಯಾಗಿದೆ. ಸಂದೀಪ್ ಅವರ ಶವಕ್ಕಾಗಿ ಹುಡುಕಾಟ ನಡೆದಿದೆ.

ಇನ್ನೊಬ್ಬ ಸ್ನೇಹಿತ ಸುಬ್ರಹ್ಮಣ್ಯ ಶಂಕರ್ ನಾಯ್ಕ ಎಂಬಾತ ಕೂಡಾ ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಮೂವರು ವಿದ್ಯಾರ್ಥಿಗಳು ಸೋಮವಾರ ಸಂಜೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣ ಅಪ್ಸರಕೊಂಡದ ಸಮುದ್ರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಈಜಲು ತೆರಳಿದ್ದರು.

ಈಜುತ್ತಿದ್ದ ಮೂವರು ಕೂಡಾ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಈ ಪೈಕಿ ಓರ್ವನನ್ನು ಮಾತ್ರ ಸ್ಥಳೀಯರು ಪಾರು ಮಾಡಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+