'ಸೀಟಿ' ರವಿ ಪೋಕರಿ ರೀ: ಎಚ್ ಡಿ ಕುಮಾರಸ್ವಾಮಿ

'ಇಂತಿಪ್ಪ ಶಾಸಕನಿಂದ ಇಲ್ಲಿನ ಪ್ರಾಕೃತಿಕ ಸಂಪತ್ತಿನ ಲೂಟಿ ನಡೆಯುತ್ತಿದೆ. ಜಲ್ಲಿ, ಮರಳು, ಕೆರೆ ಎಲ್ಲ ಅಭಿವೃದ್ಧಿ ಕೆಲಸಗಳಲ್ಲೂ ಅಕ್ರಮ ನಡೆಯುತ್ತಿದೆ. ಭಜನೆ ಮಾಡುತ್ತಾ ಮಹಾ ದೇಶ ಭಕ್ತನಂತೆ ನಟಿಸುತ್ತಾನೆ' ಎಂದು ಆರೋಪಿಸಿದ ಎಚ್ ಡಿಕೆ, 'ಬಸವನಹಳ್ಳಿ ಕೆರೆಯಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಬದಲು ಈತನ ಪ್ರತಿಮೆ ನಿಲ್ಲಿಸಬೇಕು' ಎಂದು ಸಲಹೆ ನೀಡಿದರು.
ದೊಡ್ಡ ಗೌಡರ ಎದುರು ಕೈಕಟ್ಟಿ ನಿಂತಿದ್ದರು: 'ಬಿಜೆಪಿಯ ಎಲ್ಲರೂ ಬಂದು ಅಧಿಕಾರ ನೀಡುವಂತೆ ನಮ್ಮ ತಂದೆಯ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಮಂತ್ರಿ ಮಾಡುವಂತೆ ಯಡ್ಯೂರಪ್ಪ ಗೋಗರೆದಿದ್ದರು. ಆಗ ನಾನು ತಂದೆಯ ವಿರೋಧ ಲೆಕ್ಕಿಸದೆ ಅವರಿಗೆ ನೋವು ನೀಡಿ ಬಿಜೆಪಿಗೆ ಜೀವದಾನ ನೀಡಿದೆ' ಎಂದು ಕುಮಾರಸ್ವಾಮಿ ಪಶ್ಚಾತ್ತಾಪ ಪಟ್ಟರು.












Click it and Unblock the Notifications