ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈಗ ಶೀಲಾ ದೀಕ್ಷಿತರಿಂದ ನರೇಂದ್ರ ಮೋದಿ ಭಜನೆ
ನಾನು ಪಕ್ಷದ ಪರ ಅಥವಾ ವಿರುದ್ಧ ಮಾತನಾಡುತ್ತಿಲ್ಲ. ಗುಜರಾತ್ ಪ್ರಗತಿ ಪಥದಲ್ಲಿದೆ ಎಂಬುದು ಎರಡನೇ ಮಾತಿಲ್ಲ. ಅದರಿಂದಲೇ ಅಲ್ಲಿನ ಸರಕಾರ ಮತ್ತೆ ಮತ್ತೆ ಆರಿಸಿಬರುತ್ತಿದೆ. ಅಲ್ಲಿನ ಸರಕಾರ ಮತ್ತೆ ಮತ್ತೆ ಏಕೆ ಆಯ್ಕೆಯಾಗುತ್ತಿದೆ ಅಂದರೆ ಹಾಲಿ ಸರಕಾರದಿಂದ ಅಲ್ಲಿನ ಜನಕ್ಕೆ ತಮ್ಮ ರಾಜ್ಯದ ಪ್ರಗತಿಯ ಬಗ್ಗೆ ಖಾತರಿಯಿದೆ ಎಂದು ಸಾರ್ವಜನಿಕ ಸಭೆಯಲ್ಲಿಯೇ ಶೀಲಾ ಹಾಡಿಹೊಗಳಿದರು.
ಪಕ್ಷಕ್ಕೆ ಇದರಿಂದ ಮುಜುಗುರವಾಗಿ ಟೀಕಾಸ್ತ್ರಗಳು ತಮ್ಮತ್ತ ತೂರುಬರುತ್ತಿವೆ ಎಂಬುದನ್ನು ಅರಿತ ಶೀಲಾ ಅವರು ತಕ್ಷಣ ಹೇಳಿಕೆ ನೀಡಿ, ತಾವು ಯಾವುದೇ ಒಬ್ಬ ವ್ಯಕ್ತಿಯ ಭಜನೆ ಮಾಡಲಿಲ್ಲ. ಬದಲಿಗೆ ನಿಜಕ್ಕೂ ಪ್ರಗತಿ ಪಥದಲ್ಲಿರುವ ಸರಕಾರವನ್ನು ಪ್ರಶಂಶಿಸಿದ್ದೇನೆ ಎಂದಿದ್ದಾರೆ. ದಾಖಲಾರ್ಹ ಸಂಗತಿಯೆಂದರೆ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸತತವಾಗಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.
English summary
In further embarrassment for Congress after its advertisement goof up on Narendra Modi, Delhi Chief Minister Shiela Dikshit on Tuesday (Jan 31) praised the Gujarat government, saying there was no doubt that development was taking place in that state.
Story first published: Wednesday, February 1, 2012, 9:20 [IST]