ಗಣರಾಜ್ಯೋತ್ಸವ ಪರೇಡ್ : ಭೂತಕೋಲ ಸ್ತಬ್ದಚಿತ್ರಕ್ಕೆ ಬಹುಮಾನ
ನವದೆಹಲಿ,
ಜ. 31 : 63ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ದಕ್ಷಿಣದ ಭಾರತದ ಏಕೈಕ ತಂಡವಾಗಿ ಆಯ್ಕೆಯಾಗಿ, ಜ.26ರಂದು ನೆರೆದಿದ್ದ ಸಹಸ್ರಾರು ಜನರ ಮನಗೆದ್ದಿದ್ದ ಕರ್ನಾಟಕದ ಭೂತಾರಾಧನೆ (ಭೂತಕೋಲ) ಸ್ತಬ್ದ ಚಿತ್ರ ಮೂರನೇ ಸ್ಥಾನ ಗಳಿಸಿದೆ. id="toptextpromo">ಮಂಗಳವಾರ,
ಜ. 31ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಕೆ.ಎಸ್. ಬೇವಿನಮರದ ಅವರು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ವರ್ಷ ಕರ್ನಾಟಕ ಪ್ರದರ್ಶಿಸಿದ 8ನೇ ಶತಮಾನದ ಪಟ್ಟದಕಲ್ಲು ದೇಗುಲ ಟ್ಯಾಬ್ಲೊ ಎರಡನೇ ಬಹುಮಾನ ಪಡೆದಿತ್ತು. id='are-slot-1' class='oiad oi-axt oiadv'> id='top-searched-articles'>ದಕ್ಷಿಣ
ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ, ನಂಬಿಕೆ, ಆಚರಣೆ, ಪರಂಪರೆ ಮತ್ತು ಸಂಸ್ಕೃತಿಯ ಭಾಗವಾಗಿರುವ ಭೂತಕೋಲ ವೇಷ ತೊಟ್ಟಿದ್ದ 55 ಕಲಾವಿದರು ದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಕುಣಿದಿದ್ದರು, ಕರ್ನಾಟಕದ ಈ ಅದ್ಭುತ ಕಲೆಯನ್ನು ಉತ್ತರ ಭಾರತದಲ್ಲಿ ಪ್ರದರ್ಶಿಸಿದ್ದರು.











Click it and Unblock the Notifications