ಚಿಲ್ರೆ ಅಭಾವ ಅಂತ ಮುಂಬೈ ವರ್ತಕರು ಮಾಡಿದ್ದೇನು?

ಅದಕ್ಕಾಗಿ ದಕ್ಷಿಣ ಮುಂಬೈ ವರ್ತಕರು ವಿನೂತನ ಕ್ರಮ ಅಳವಡಿಸಿಕೊಂಡಿದ್ದು 1 ಮತ್ತು 2 ರೂ. ಮುಖಬೆಲೆಯ ತಮ್ಮದೇ ಚಿಲ್ಲರೆ ನಾಣ್ಯಗಳನ್ನು ಟಂಕಿಸಿದ್ದಾರೆ ಮತ್ತು ತಮ್ಮೊಳಗೆ ಅದನ್ನು ಚಲಾವಣೆಗೆ ಇಳಿಸಿದ್ದಾರೆ. ಆದರೆ ಇದು ವಿವಾದಕ್ಕೆ ಗುರಿಯಾಗಿದ್ದು, ಈ ವ್ಯವಸ್ಥೆ ಕಾನೂನುಬಾಹಿರ ಎಂಬ ಕೂಗು ಎದ್ದಿದೆ.
ಈ ನಾಣ್ಯಗಳು ಅಕ್ರಮವಲ್ಲ, ಏಕೆಂದರೆ ಅವು ಪ್ರಸರಣದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ದೃಢೀಕೃತ ನಾಣ್ಯಗಳ ನಕಲಿಯಲ್ಲ ಎಂದು ಕಿರಾಣಿ ಅಂಗಡಿ ಮಾಲಕ ಅಸ್ಲಾಂ ಶೇಖ್ ಹೇಳುತ್ತಾರೆ. ಆದರೆ ಅವರವರ ಅನುಕೂಲಕ್ಕೆ ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಈ ಮಧ್ಯೆ ಆರ್ ಬಿಐ ಏನು ಮಾಡುತ್ತಿದೆ ಎಂದು ಪ್ರಜ್ಞಾವಂತ ಜನ ಕೇಳುವಂತಾಗಿದೆ.
ವರ್ತಕರ ಒಂದು ಸಂಘವಾದ ದ ಮಾಂಡ್ವಿ-ಕೋಳಿವಾಡ್ ಎಸೋಸಿಯೇಶನ್ ಒಂದು ಬದಿಯಲ್ಲಿ ಎಂಕೆಎ ಲಾಂಛನ ಹಾಗೂ ಇನ್ನೊಂದು ಬದಿಯಲ್ಲಿ ಮುಖಬೆಲೆ ಹೊಂದಿರುವ ನಾಣ್ಯಗಳನ್ನು ಟಂಕಿಸಿದೆ. ಈತನಕ 1 ಮತ್ತು 2 ರೂ. ಮುಖಬೆಲೆಯ ಸುಮಾರು 50,000 ನಾಣ್ಯಗಳನ್ನು ಟಂಕಿಸಲಾಗಿದೆ ಮತ್ತು ಭೆಂಡಿ ಬಜಾರು ಹಾಗೂ ಮಸ್ಜಿದ್ ಬಂದರುಗಳ ಸಗಟು ಮಾರುಕಟ್ಟೆಗಳಲ್ಲಿ ಇವು ಚಲಾವಣೆಯಲ್ಲಿವೆ.
ವರ್ತಕರು ನಾಣ್ಯಗಳ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ ಮತ್ತು ಅವುಗಳ ಯದ್ವಾತದ್ವಾ ಕಾಳಸಂತೆಯಿಂದಾಗಿ ನಾವು ಈ ನಾಣ್ಯಗಳನ್ನು ಬಳಸುವುದು ಅನಿವಾರ್ಯವಾಯಿತು ಎಂದು ಅವರು ಹೇಳುತ್ತಾರೆ. ಕಾಳಸಂತೆಯಲ್ಲಿ 1 ರೂಪಾಯಿಯ 100 ನಾಣ್ಯಗಳಿಗೆ 114 ರೂ. ತೆರಬೇಕಾಗಿದೆ. 2 ರೂಪಾಯಿಯ 50 ನಾಣ್ಯಗಳಿಗೆ 115 ರೂ., 5 ರೂಪಾಯಿಯ 20 ನಾಣ್ಯಗಳಿಗೆ 118 ರೂ. ದರವಿದೆ.
ಈ ದರಗಳು ಬದಲಾಗುತ್ತಿರುತ್ತವೆ. ಹಬ್ಬದ ವೇಳೆ 100 ರೂ. ನಾಣ್ಯಗಳಿಗೆ 125 ರೂ.ವರೆಗೂ ಕಕ್ಕಬೇಕಾಗುತ್ತದೆ ಎಂದು ಮತ್ತೊಬ್ಬ ವರ್ತಕ ಹೇಳುತ್ತಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications