ಚಿಲ್ರೆ ಅಭಾವ ಅಂತ ಮುಂಬೈ ವರ್ತಕರು ಮಾಡಿದ್ದೇನು?

ಅದಕ್ಕಾಗಿ ದಕ್ಷಿಣ ಮುಂಬೈ ವರ್ತಕರು ವಿನೂತನ ಕ್ರಮ ಅಳವಡಿಸಿಕೊಂಡಿದ್ದು 1 ಮತ್ತು 2 ರೂ. ಮುಖಬೆಲೆಯ ತಮ್ಮದೇ ಚಿಲ್ಲರೆ ನಾಣ್ಯಗಳನ್ನು ಟಂಕಿಸಿದ್ದಾರೆ ಮತ್ತು ತಮ್ಮೊಳಗೆ ಅದನ್ನು ಚಲಾವಣೆಗೆ ಇಳಿಸಿದ್ದಾರೆ. ಆದರೆ ಇದು ವಿವಾದಕ್ಕೆ ಗುರಿಯಾಗಿದ್ದು, ಈ ವ್ಯವಸ್ಥೆ ಕಾನೂನುಬಾಹಿರ ಎಂಬ ಕೂಗು ಎದ್ದಿದೆ.
ಈ ನಾಣ್ಯಗಳು ಅಕ್ರಮವಲ್ಲ, ಏಕೆಂದರೆ ಅವು ಪ್ರಸರಣದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ದೃಢೀಕೃತ ನಾಣ್ಯಗಳ ನಕಲಿಯಲ್ಲ ಎಂದು ಕಿರಾಣಿ ಅಂಗಡಿ ಮಾಲಕ ಅಸ್ಲಾಂ ಶೇಖ್ ಹೇಳುತ್ತಾರೆ. ಆದರೆ ಅವರವರ ಅನುಕೂಲಕ್ಕೆ ಪರ್ಯಾಯ ಹಣಕಾಸು ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಈ ಮಧ್ಯೆ ಆರ್ ಬಿಐ ಏನು ಮಾಡುತ್ತಿದೆ ಎಂದು ಪ್ರಜ್ಞಾವಂತ ಜನ ಕೇಳುವಂತಾಗಿದೆ.
ವರ್ತಕರ ಒಂದು ಸಂಘವಾದ ದ ಮಾಂಡ್ವಿ-ಕೋಳಿವಾಡ್ ಎಸೋಸಿಯೇಶನ್ ಒಂದು ಬದಿಯಲ್ಲಿ ಎಂಕೆಎ ಲಾಂಛನ ಹಾಗೂ ಇನ್ನೊಂದು ಬದಿಯಲ್ಲಿ ಮುಖಬೆಲೆ ಹೊಂದಿರುವ ನಾಣ್ಯಗಳನ್ನು ಟಂಕಿಸಿದೆ. ಈತನಕ 1 ಮತ್ತು 2 ರೂ. ಮುಖಬೆಲೆಯ ಸುಮಾರು 50,000 ನಾಣ್ಯಗಳನ್ನು ಟಂಕಿಸಲಾಗಿದೆ ಮತ್ತು ಭೆಂಡಿ ಬಜಾರು ಹಾಗೂ ಮಸ್ಜಿದ್ ಬಂದರುಗಳ ಸಗಟು ಮಾರುಕಟ್ಟೆಗಳಲ್ಲಿ ಇವು ಚಲಾವಣೆಯಲ್ಲಿವೆ.
ವರ್ತಕರು ನಾಣ್ಯಗಳ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ ಮತ್ತು ಅವುಗಳ ಯದ್ವಾತದ್ವಾ ಕಾಳಸಂತೆಯಿಂದಾಗಿ ನಾವು ಈ ನಾಣ್ಯಗಳನ್ನು ಬಳಸುವುದು ಅನಿವಾರ್ಯವಾಯಿತು ಎಂದು ಅವರು ಹೇಳುತ್ತಾರೆ. ಕಾಳಸಂತೆಯಲ್ಲಿ 1 ರೂಪಾಯಿಯ 100 ನಾಣ್ಯಗಳಿಗೆ 114 ರೂ. ತೆರಬೇಕಾಗಿದೆ. 2 ರೂಪಾಯಿಯ 50 ನಾಣ್ಯಗಳಿಗೆ 115 ರೂ., 5 ರೂಪಾಯಿಯ 20 ನಾಣ್ಯಗಳಿಗೆ 118 ರೂ. ದರವಿದೆ.
ಈ ದರಗಳು ಬದಲಾಗುತ್ತಿರುತ್ತವೆ. ಹಬ್ಬದ ವೇಳೆ 100 ರೂ. ನಾಣ್ಯಗಳಿಗೆ 125 ರೂ.ವರೆಗೂ ಕಕ್ಕಬೇಕಾಗುತ್ತದೆ ಎಂದು ಮತ್ತೊಬ್ಬ ವರ್ತಕ ಹೇಳುತ್ತಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications