ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಗೆ ಆಘಾತ: ಭಾವಮೈದುನ ಸುನಿಲ್ ಬಂಧನ

By Srinath
|
Google Oneindia Kannada News

jagan-gets-a-jolt-cbi-arrests-sunil-reddy
ಹೈದರಾಬಾದ್, ಜ.25: ಜಗನ್ ಮೋಹನ್ ರೆಡ್ಡಿ ಭಾಗಿಯಾಗಿದ್ದಾರೆನ್ನಲಾದ ಎಮ್ಮಾರ್ ಹಗರಣದಲ್ಲಿ ಆರೋಪಿಯೊಬ್ಬ ಕೋರ್ಟಿನಲ್ಲೇ ನೀಡಿರುವ ಹೇಳಿಕೆಯನ್ನು ಆಧರಿಸಿ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರು ಜಗನ್ ಭಾವಮೈದುನ ಸುನಿಲ್ ರೆಡ್ಡಿಯನ್ನು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ಜಗನ್ ಬಂಧನದ ಕುಣಿಕೆಗೆ ಮತ್ತೊಂದು ಕೊಂಡಿ ಸಿಕ್ಕಂತಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಅತ್ಯಾಪ್ತ ವಿ. ವಿಜಯ್ ಸಾಯಿ ರೆಡ್ಡಿ ಅವರನ್ನು ಸಿಬಿಐ ಜ.2ರಂದು ಬಂಧಿಸಿದೆ. ಹಾಗೆಯೇ, ಎಮ್ಮಾರ್ ಹಗರಣದಲ್ಲಿ ಈಗಾಗಲೇ ಉದ್ಯಮಿ ತುಮ್ಮಲ ರಂಗಾರಾವ್ ಸಿಬಿಐ ಬಂಧನದಲ್ಲಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಕೋನೇರು ಪ್ರಸಾದ್ ಆದೇಶಿಸಿದಂತೆ ಸುನಿಲ್ ಗೆ 80 ಕೋಟಿ ರುಪಾಯಿ ನೀಡಿರುವುದಾಗಿ ರಂಗಾರಾವ್ ಕೋರ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಎಮ್ಮಾರ್ ಹಗರಣದಲ್ಲಿ ಕೋನೇರು ಪ್ರಸಾದ್ 138 ಕೋಟಿ ರುಪಾಯಿ ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. ಮೂಲತಃ ಕಡಪ ಜಿಲ್ಲೆಯವರಾದ ಸುನಿಲ್, ಚೆನ್ನೈನಲ್ಲಿ ಎಂಬಿಎ ಮಾಡಿದ್ದಾರೆ. ಅವರ ತಂದೆ ಭೂಗರ್ಭಶಾಸ್ತ್ರಜ್ಞರು.

ಸಿಬಿಐ ಅಧಿಕಾರಿಗಳು ನಗರದ ಹೊರಭಾಗದಲ್ಲಿ ಗೋಪನ್ನಪಾಳ್ಯದ ಬಳಿಯಿರುವ ಪ್ರತಿಷ್ಠಿತ ಅಪರ್ಣ ಸೈಬರ್ ಕಂಟ್ರಿಯಲ್ಲಿ ಸುನಿಲ್ ಗೆ ಸೇರಿದ ಭವ್ಯ ಬಂಗಲೆಯನ್ನು ಜಾಲಾಡಿದ್ದಾರೆ. ಜತೆಗೆ, ಸುನಿಲ್ ಪತ್ನಿ ಕೃಷ್ಣ ತೇಜಾ ಅವರು ಜ್ಯುಬಿಲಿ ಹಿಲ್ಸ್ ನಲ್ಲಿ ನಡೆಸುತ್ತಿರುವ ಇಂಟೀರಿಯರ್ ಡೆಕೋರೇಶನ್ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ.

English summary
The CBI on Tuesday (Jan 23) arrested N. Sunil Reddy, kith of Kadapa MP Y.S. Jagan Mohan Reddy, in the Emaar-APIIC scam based on statements of Stylish Homes’ director Mr Tummala Ranga Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X