ಸಿಂದಗಿ ಪಾಕ್ ಧ್ವಜ:ರಾಮಸೇನೆಗೆ ನಿಷೇಧದ ತೂಗುಕತ್ತಿ

ಶ್ರೀರಾಮಸೇನೆ ಸಂಘಟನೆ ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಆದರೆ ಈ ಬಾರಿ ಸಂಘಟನೆಯನ್ನು ನಿಷೇಧಕ್ಕೊಳಪಡಿಸುವುದು ಖಚಿತ ಎಂದು ಅಶೋಕ್ ಘಂಟಾಘೋಶವಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು. ಆದರೆ ನಿಷೇಧದ ಅವಧಿ, ಅದರ ಸ್ವರೂಪಗಳ ಬಗ್ಗೆ ಅಶೋಕ್ ಹೆಚ್ಚಿನ ಮಾಹಿತಿ ನೀಡಲಿಲ್ಲ.
ಗಮನಾರ್ಹವೆಂದರೆ ಹುಣಸೂರು ವಿರ್ದಾರ್ಥಿಗಳ ಅಪಹರಣ ಮತ್ತು ಹತ್ಯೆಯಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದ KFD ಮತ್ತು PDI ಸಂಘಟನೆಯನ್ನು ನಿಷೇಧಿಸುವ ಬಗ್ಗೆಯೂ ಆರು ತಿಂಗಳ ಹಿಂದೆ ಅಶೋಕ್ ಇದೇ ಮಾತುಗಳನ್ನು ಹೇಳಿದ್ದರು.












Click it and Unblock the Notifications