ಬಳ್ಳಾರಿ, ಬೆಂಗಳೂರಿನಲ್ಲಿ BSR Congress ಕಚೇರಿ ರೆಡಿ

ಬಳ್ಳಾರಿಯಲ್ಲಿ ಈ ಹಿಂದೆ ಬಿಜೆಪಿಯ ಕಚೇರಿಯಾಗಿದ್ದ ಕಟ್ಟಡವೇ ಈಗ ರಾಮುಲು ಪಕ್ಷದ ಕಚೇರಿಯಾಗಲಿದೆ. ಒಳವಿನ್ಯಾಸ ಬದಲಿಸುವ ಕಾಮಗಾರಿಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದು ಗಣಿರೆಡ್ಡಿಗಳ ಪಾಳೆಯಕ್ಕೆ ಸೇರಿದ ಸ್ವಂತ ಕಟ್ಟಡ.
ಇನ್ನು ಬೆಂಗಳೂರಿನಲ್ಲಿ ಈ ಮೊದಲು ಸದಾಶಿವನಗರದಲ್ಲಿ ಪಕ್ಷದ ಕಚೇರಿ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ, ಬಡವರ ಹೆಸರಿನಲ್ಲಿ ಪಕ್ಷದ ಹೆಸರನ್ನು ಇಟ್ಟುಕೊಂಡು ಶ್ರೀಮಂತರ ಪ್ರದೇಶವಾದ ಸದಾಶಿವನಗರದಲ್ಲಿ ಕಚೇರಿ ಆರಂಭಿಸುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಆ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.
ಇದೀಗ ನಗರದ ಕುಮಾರಪಾರ್ಕ್ನ ರೇಲ್ವೆ ಸಮಾನಾಂತರ ರಸ್ತೆಯಲ್ಲಿ ಕಟ್ಟಡವೊಂದನ್ನು ಗುರುತಿಸಲಾಗಿದ್ದು, ಅಲ್ಲಿ ಪಕ್ಷದ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications