ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪಲೋಕಾಯುಕ್ತರಾಗಿ ಚಂದ್ರಶೇಖರಯ್ಯ ಪ್ರಮಾಣ
ಗೃಹ ಸಚಿವ ಆರ್ ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುತೂಹಲದ ಸಂಗತಿಯೆಂದರೆ ನ್ಯಾ. ಚಂದ್ರಶೇಖರಯ್ಯ ಅವರನ್ನೂ ಭೂಕಳಂಕ ಚಕ್ರ ಸುತ್ತಿಕೊಂಡಿದೆ. ನೌಕರರಿಗೆ ಮೀಸಲಾದ ಬಡಾವಣೆಯಲ್ಲಿ 15 ವರ್ಷಗಳ ಹಿಂದೆಯೇ ನ್ಯಾಯಾಧೀಶನಾಗಿ ತಾನೂ ನಿವೇಶನ ಪಡೆದಿರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ನ್ಯಾ. ಚಂದ್ರಶೇಖರಯ್ಯ ನೇಮಕಕ್ಕೆ ರಾಜ್ಯಪಾಲ ಭಾರದ್ವಾಜ್ ಅವರು ಅಪಸ್ವರ ಎತ್ತರದಿರುವುದು ಆಶ್ಚರ್ಯ ತಂದಿದೆ.
ಕಳೆದ ಜುಲೈ ತಿಂಗಳಲ್ಲಿ ಉಪ ಲೋಕಾಯುಕ್ತ-2 ಹುದ್ದೆ ಸೃಷ್ಟಿಸಲಾಗಿತ್ತು. ಈ ಹುದ್ದೆಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್ ಗುರುರಾಜನ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಭೂಕಳಂಕಿತರಾಗಿ ಗುರುರಾಜನ್ ಅವರು ಅಕ್ಟೋಬರ್ 13ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು.
Comments
ಲೋಕಾಯುಕ್ತ ನೇಮಕಾತಿ ಭೂ ಹಗರಣ ನ್ಯಾಯಮೂರ್ತಿ ಬನ್ನೂರುಮಠ ರಾಜೀನಾಮೆ ರಾಜ್ಯಪಾಲ ಭಾರದ್ವಾಜ್ ಬೆಂಗಳೂರು ಕ್ರೈಂ justice sr bannur matt land scam lokayukta fraud resignation governor bhardwaj
English summary
Justice Chandrashekaraiah takes oath as 2nd Upalokayukta Karnataka on Jan 22 in Bangalore.
Story first published: Sunday, January 22, 2012, 17:21 [IST]