ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲರ ವಿರುದ್ಧ ಕ್ರಿಮಿನಲ್ ಕೇಸ್; ಪೇದೆ ಬಚಾವ್

By Srinath
|
Google Oneindia Kannada News

ಬೆಂಗಳೂರು, ಜ.18: ಮಂಗಳವಾರ ಬೆಂಗಳೂರಿನಲ್ಲಿ ವಕೀಲರ ಪುಂಡಾಟಿಕೆ ಅಕ್ಷಮ್ಯ. ತಪ್ಪು ಮಾಡಿದ ವಕೀಲರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹಾದೇವ ಬಿದರಿ ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಕೀಲರಿಂದ ಹಲ್ಲೆಗೊಳಗಾದ ಪೇದೆ ಅರುಣ್ ಅವರನ್ನು ಅಮಾನತುಗೊಳಿಸಿಲ್ಲ ಎಂದು ಬಿದರಿ ತಿಳಿಸಿದ್ದಾರೆ.

ವಕೀಲರ ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಅವರು ಸಲ್ಲಿಸಿರುವ 20 ಪುಟಗಳ ಸುದೀರ್ಘ ವರದಿಯನ್ನು ಸ್ವೀಕರಿಸಿ, ಮಾತನಾಡಿದ ಬಿದರಿ ಇನ್ಮುಂದೆ ಯಾರಿಗೇ ಆಗಲಿ ಈ ರೀತಿ ಪುಂಡಾಟಿಕೆ ನಡೆಸಲು ಬಿಡುವುದಿಲ್ಲ. ಇದು ಗುರುತರ ಅಪರಾಧ.

5 ನಿಮಿಷಕ್ಕಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಲು ಯಾವುದೇ ವ್ಯಕ್ತಿ-ಶಕ್ತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿದರಿ ಹೇಳಿದ್ದಾರೆ.

'ಎಲ್ಲದಕ್ಕೂ ಒಂದು ಮಿತಿ ಇದೆ. ಕಾನೂನು ಹಿಡಿತದಿಂದ ಪಾರಾಗಬಹುದು ಎಂಬ ಭ್ರಮೆ ಬೇಡ' ಎಂದೂ ಬಿದರಿ ನಗಾರಿ ಬಾರಿಸಿದ್ದಾರೆ.

English summary
Police v/s Lawyers : Karnataka DGP Shankar Bidari on Wednesday said a criminal case will be filed soon against arrogant lawyers who created chaos and traffic jam in Bangalore on Tuesday (Jan 17) However, the constable in question is spared. The fight between Lawyers and Police took place because a constable took law in to the hands and beat up a Lawyer who violated traffic rules in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X