ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಕೀಲರ ವಿರುದ್ಧ ಕ್ರಿಮಿನಲ್ ಕೇಸ್; ಪೇದೆ ಬಚಾವ್
ಇದೇ ಸಂದರ್ಭದಲ್ಲಿ ವಕೀಲರಿಂದ ಹಲ್ಲೆಗೊಳಗಾದ ಪೇದೆ ಅರುಣ್ ಅವರನ್ನು ಅಮಾನತುಗೊಳಿಸಿಲ್ಲ ಎಂದು ಬಿದರಿ ತಿಳಿಸಿದ್ದಾರೆ.
ವಕೀಲರ ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಅವರು ಸಲ್ಲಿಸಿರುವ 20 ಪುಟಗಳ ಸುದೀರ್ಘ ವರದಿಯನ್ನು ಸ್ವೀಕರಿಸಿ, ಮಾತನಾಡಿದ ಬಿದರಿ ಇನ್ಮುಂದೆ ಯಾರಿಗೇ ಆಗಲಿ ಈ ರೀತಿ ಪುಂಡಾಟಿಕೆ ನಡೆಸಲು ಬಿಡುವುದಿಲ್ಲ. ಇದು ಗುರುತರ ಅಪರಾಧ.
5 ನಿಮಿಷಕ್ಕಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಲು ಯಾವುದೇ ವ್ಯಕ್ತಿ-ಶಕ್ತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿದರಿ ಹೇಳಿದ್ದಾರೆ.
'ಎಲ್ಲದಕ್ಕೂ ಒಂದು ಮಿತಿ ಇದೆ. ಕಾನೂನು ಹಿಡಿತದಿಂದ ಪಾರಾಗಬಹುದು ಎಂಬ ಭ್ರಮೆ ಬೇಡ' ಎಂದೂ ಬಿದರಿ ನಗಾರಿ ಬಾರಿಸಿದ್ದಾರೆ.
ವಕೀಲರು ಶಂಕರ್ ಬಿದರಿ ಬೆಂಗಳೂರು ಪೊಲೀಸ್ ಜ್ಯೋತಿ ಪ್ರಕಾಶ್ ಮಿರ್ಜಿ ಪೊಲೀಸ್ ವಿವಾದ ಬೆಂಗಳೂರು ಟ್ರಾಫಿಕ್ ಜಾಮ್ ಜಿಲ್ಲಾಸುದ್ದಿ lawyer bangalore traffic jam ಮುಷ್ಕರ
English summary
Police v/s Lawyers : Karnataka DGP Shankar Bidari on Wednesday said a criminal case will be filed soon against arrogant lawyers who created chaos and traffic jam in Bangalore on Tuesday (Jan 17) However, the constable in question is spared. The fight between Lawyers and Police took place because a constable took law in to the hands and beat up a Lawyer who violated traffic rules in the city.
Story first published: Wednesday, January 18, 2012, 16:48 [IST]