ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರಿಗೆ ಮಾಯಾಬೂದಿ:ಭ್ರಷ್ಭ ಶಾಸಕರಿಗೂ ಕೊಕ್

By Srinath
|
Google Oneindia Kannada News

up-polls-mayawati-denies-tickets-to-100-bsp-mlas
ಲಖ್ನೊ,ಜ.17: ಚುನಾವಣೆ ಕಾಲೇ... ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕಾರ್ಯಕ್ರಮ ಮುಂದುವರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಭ್ರಷ್ಟಾತಿಭ್ರಷ್ಟ ಸಚಿವರನ್ನು ಓಡಿಸಿದ ಬಳಿಕ ಇದೀಗ ಅನೇಕ ಶಾಸಕರಿಗೂ ಗೇಟ್ ಪಾಸ್ ನೀಡಲಾರಂಭಿಸಿದ್ದಾರೆ. ತನ್ಮೂಲಕ ಮತದಾರರ ಮೇಲೆ ಮಂಕುಬೂದಿ ಎರಚುವ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಮತದಾರ ಪ್ರಭು ಎಷ್ಟರ ಮಟ್ಟಿಗೆ ಮರುಳಾಗುತ್ತಾನೋ, ಗೊತ್ತಿಲ್ಲ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಒಂದು ಕಡೆಯಿಂದ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಒಂದೇ ಸಮನೆ ಮಾಯಾವತಿ ದುರಾಡಳಿತದ ವಿರುದ್ಧ ಭಾರಿ ಪ್ರಚಾರದಲ್ಲಿ ತೊಡಗಿವೆ. ಇದರಿಂದ ದಿಕ್ಕೆಟ್ಟವರಂತೆ ಮಾಯಾವತಿ, ತಮ್ಮ ಪಕ್ಷದ ಅರ್ಧದಷ್ಟು ಶಾಸಕರಿಗೆ ಚುನಾವಣೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ.

ಸುಮಾರು 100ಕ್ಕೂ ಹೆಚ್ಚು ಶಾಸಕರು, ಸಚಿವರಿಗೆ ಮಾಯಾ ಭಾನುವಾರ ಗೇಟ್ ಪಾಸ್ ನೀಡಿ, ಕಣದಿಂದ ಹೊರಕ್ಕಟ್ಟಿದ್ದಾರೆ. ಇವರೆಲ್ಲ 2007 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಯಾರ ಬಿಎಸ್ಪಿ ಪಕ್ಷವನ್ನು ಅಪ್ಪಿಕೊಂಡಿದ್ದ ಕಲಿಗಳು.

English summary
Under attack from opposition parties over the corruption issue and to present a clean image before voters, the BSP has denied tickets to nearly half (100) of its sitting MLAs for the coming Uttar Pradesh Assembly polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X